ಸುಳ್ಯದ ಮುಳಿಯ ಜ್ಯುವೆಲ್ಲರ್ಸ್ ಗೆ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಭೇಟಿ

0

ಸುಳ್ಯದ ಪ್ರಸಿದ್ಧ ಚಿನ್ನಾಭರಣಗಳ ಮಳಿಗೆ ಮುಳಿಯ ಜ್ಯುವೆಲ್ಲರ್ಸ್ ಗೆ ಅಯೋಧ್ಯೆ ಶ್ರೀ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನ ವಿಶ್ವಸ್ಥರಾಗಿರುವ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು ಎ.01 ರಂದು ಭೇಟಿ ನೀಡಿದರು.


ಮಡಿಕೇರಿ ಕಡೆಗೆ ಕಾರಲ್ಲಿ ಹೋಗುವಾಗ ಅವರು ಮಳಿಗೆಗೆ ಭೇಟಿ ನೀಡಿದರು.
ಸ್ವಾಮೀಜಿಯವರನ್ನು ಜ್ಯುವೆಲ್ಲರ್ಸ್ ಮಾಲಕರಾದ ಗೋವಿಂದ ಭಟ್ ಮುಳಿಯ ಮತ್ತು ಶಿವರಾಮ ಭಟ್ ಮುಳಿಯರವರು ಮಳಿಗೆಗೆ ಬರಮಾಡಿಕೊಂಡು ಸ್ವಾಮೀಜಿಯ ಆಶೀರ್ವಾದ ಪಡೆದರು.
ಈ ಸಂದರ್ಭದಲ್ಲಿ ಸಿದ್ಧಾರ್ಥ್ ಕೃಷ್ಣ ಮುಳಿಯ, ಅನಂತಕೃಷ್ಣ ಮುಳಿಯ, ಸ್ಟಡಿಯೋ ಗೋಪಾಲ್ ,ಸುಂದರ ರಾವ್, ಶಿವನಾಥ್, ಹಿಮಗಿರಿ ಮೆಡಿಕಲ್ ನ ಆದಿತ್ಯ , ಜ್ಯುವೆಲ್ಲರ್ಸ್ ನ ಸಿಬ್ಬಂದಿ ವರ್ಗದವರು ಹಾಗೂ ಗ್ರಾಹಕರು ಉಪಸ್ಥಿತರಿದ್ದರು.