ಗಾಂಧಿನಗರ ಸುನ್ನಿ ಸೆಂಟರ್ ನಲ್ಲಿ ಸಂಘಟನೆಗಳ ವತಿಯಿಂದ ಇಫ್ತಾರ್ ಕೂಟ, ಸನ್ಮಾನ ಕಾರ್ಯಕ್ರಮ

0

ಗಾಂಧಿನಗರ ಕರ್ನಾಟಕ ಮುಸ್ಲಿಂ ಜಮಾಅತ್, ಎಸ್ ವೈ ಎಸ್, ಎಸ್ ಎಸ್ ಎಫ್ ಸಂಘಟನೆಗಳ ವತಿಯಿಂದ ಮಾಸಿಕ ಮಹಲರತುಲ್ ಬದ್ರಿಯಾ ಮಜ್ಲಿಸ್,ಇಫ್ತಾರ್ ಕೂಟ ಹಾಗೂ ಸನ್ಮಾನ ಕಾರ್ಯಕ್ರಮ ಏಪ್ರಿಲ್ 1ರಂದು ಗಾಂಧಿನಗರ ಸುನ್ನಿ ಸೆಂಟರ್ ನಲ್ಲಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ತೆಕ್ಕೆಲ್ ಪ್ರತಿಷ್ಠಾನದ ಅಧ್ಯಕ್ಷ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ ಎಂ ಶಹೀದ್, ನಗರ ಪಂಚಾಯತ್ ನಾಮನಿರ್ದೇಶಕರಾಗಿ ಆಯ್ಕೆಗೊಂಡ ಸಿದ್ದೀಕ್ ಕೊಕ್ಕೋ, ಅನಿವಾಸಿ ಉದ್ಯಮಿ ರಿಫಾಯಿ ಗೂನಡ್ಕ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸಯ್ಯದ್ ಜೈನುಲ್ ಆಬಿದೀನ್ ತಂಗಳ್ ಜಯನಗರ, ಗಾಂಧಿನಗರ ಜುಮಾ ಮಸೀದಿ ಆಡಳಿತ ಸಮಿತಿ ಅಧ್ಯಕ್ಷ ಹಾಜಿ ಮುಸ್ತಫ ಜನತಾ, ಹಿರಿಯರಾದ ಅಬೂಬಕ್ಕರ್ ಜಟ್ಟಿಪಳ್ಳ,ಎಸ್ ವೈ ಎಸ್ ಸಮಿತಿ ಮುಖಂಡ ಅಬೂಬಕ್ಕರ್ ಸಿದ್ದೀಕ್ ಕಟ್ಟಿಕ್ಕಾರ್ಸ್,ನೌಶಾದ್ ಕೆರೆಮೂಲೆ, ನೌಶಾದ್ ಬಿಎ, ಮೊದಲಾದವರು ಉಪಸ್ಥಿತರಿದ್ದರು.