ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನಕ್ಕೆ ಧನಸಹಾಯ

0

ಶಿಕ್ಷಣತಜ್ಞ ಪ್ರೊ. ರಾಧಾಕೃಷ್ಣ ಹಾಗೂ ಪೆರಾಜೆಯ ಸೈನಿಕರು ಹಾಗೂ ನಿವೃತ್ತ ಸೈನಿಕರಿಂದ ಧನಸಹಾಯದ ಚೆಕ್ ಹಸ್ತಾಂತರ

ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನಕ್ಕೆ ಶಿಕ್ಷಣ ತಜ್ಞ ಪ್ರೋ. ರಾಧಾಕೃಷ್ಣ ಕೆ.ಇ. ಹಾಗೂ ಪೆರಾಜೆ ಗ್ರಾಮದವರಾಗಿದ್ದು, ಭಾರತೀಯ ಸೇನೆಯಲ್ಲಿ ನಿವೃತ್ತರಾದ ಸೈನಿಕರು ಹಾಗೂ ಪ್ರಸ್ತುತ ಸೇವೆ ಸಲ್ಲಿಸುತ್ತಿರುವ ಸೈನಿಕರು ಸೇರಿ ಎ.1ರಂದು ಧನಸಹಾಯ ನೀಡಿದರು.

ಪ್ರೊ. ಕೆ.ಇ. ರಾಧಾಕೃಷ್ಣ ಅವರು ತಮ್ಮ ಮಾತಾಪಿತೃಗಳ ಸ್ಮರಣಾರ್ಥ ದೇಗುಲದ ರಾಜಗೋಪುರ ನಿರ್ಮಾಣಕ್ಕೆ ಒಂದು ಲಕ್ಷ ರೂ.ದೇಣಿಗೆಯ ಚೆಕ್ ಹಾಗೂ ಪೆರಾಜೆ ಗ್ರಾಮದವರಾಗಿದ್ದು, ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸೈನಿಕರು ಹಾಗೂ ಗ್ರಾಮದ ನಿವೃತ್ತ ಸೈನಿಕರು ಸೇರಿ 66,800 ರೂ.ಗಳ ಚೆಕ್ಕನ್ನು ದೇವಸ್ಥಾನದ ಆಡಳಿತ ಮಂಡಳಿಯವರಿಗೆ ಹಸ್ತಾಂತರಿಸಿದರು.