ಎ.20,21 : ಐವರ್ನಾಡು ಪಾಲೆಪ್ಪಾಡಿ ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲ

0

ಐವರ್ನಾಡು ಗ್ರಾಮದ ಪಾಲೆಪ್ಪಾಡಿ ಶ್ರೀ ವಯನಾಟ್ ಕುಲವನ್ ಶ್ರೀ ವಿಷ್ಣುಮೂರ್ತಿ ದೈವಸ್ಥಾನದ ಮುಂಭಾಗದಲ್ಲಿ ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲವು ಎ.20 ಮತ್ತು ಎ.21 ರಂದು ನಡೆಯಲಿದೆ.


ಎ.20 ರಂದು ಶನಿವಾರ ಸಂಜೆ ಗಂಟೆ 6.00 ಕ್ಕೆ ಕೈವಿದು, ರಾತ್ರಿ ಗಂಟೆ 8.30 ಕ್ಕೆ ಭಂಡಾರ ತೆಗೆಯುವುದು,ರಾತ್ರಿ ಗಂಟೆ 9.00 ಕ್ಕೆ ಮೇಲೇರಿಗೆ ಅಗ್ನಿಸ್ಪರ್ಶ ರಾತ್ರಿ 9.30 ಕ್ಕೆ ಅನ್ನಸಂತರ್ಪಣೆ ರಾತ್ರಿ ಗಂಟೆ 11.00 ಕ್ಕೆ ಶ್ರೀ ದೈವದ ಕುಳ್ಚಾಟ ನಡೆಯಲಿದೆ.
ರಾತ್ರಿ ಗಂಟೆ 1.00 ಕ್ಕೆ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ಯಕ್ಷಗಾನ ನಡೆಯಲಿದೆ.


ಎ.21 ರಂದು ಆದಿತ್ಯವಾರ ಬೆಳಿಗ್ಗೆ ಗಂಟೆ 5.30 ಕ್ಕೆ ಶ್ರೀ ದೈವದ ಅಗ್ನಿಪ್ರವೇಶ ಗಂಟೆ 7.00 ಕ್ಕೆ ಪ್ರಸಾದ ವಿತರಣೆ ಬೆಳಿಗ್ಗೆ ಗಂಟೆ 8.00 ಕ್ಕೆ ಮಾರಿಕಳ ನಡೆಯಲಿದೆ.
ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ದೈವದ ಕೃಪೆಗೆ ಪಾತ್ರರಾಗಬೇಕೆಂದು ಶ್ರೀಮತಿ ಜ್ಯೊತ್ಸ್ನಾ ಪಾಲೆಪ್ಪಾಡಿಯವರು ತಿಳಿಸಿದ್ದಾರೆ.