ನಾಲ್ಕೂರು ವಲಯ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ದಿನೇಶ್ ಹಾಲೆಮಜಲು

0


ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಇದರ ನಾಲ್ಕೂರು ಗ್ರಾಮದ ವಲಯ ಕಾಂಗ್ರೆಸ್ ಸಮಿತಿ ಅಧ್ಯಕ್ಷರನ್ನಾಗಿ ದಿನೇಶ್ ಹಾಲೆಮಜಲುರವರನ್ನು ಇತ್ತೀಚೆಗೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ. ಜಯರಾಮರವರು ಆಯ್ಕೆ ಮಾಡಿದ್ದಾರೆ,
ದಿನೇಶ್‌ರವರು ಕರ್ನಾಟಕ ಸರಕಾರದ ಅರೆಭಾಷೆ ಸಾಹಿತ್ಯ ಮತ್ತು ಸಂಸ್ಕೃತಿ ಅಕಾಡೆಮಿಯ ಮಾಜಿ ಸದಸ್ಯರಾಗಿದ್ದು, ಹತ್ತು ಹಲವು ಸಂಘ ಸಂಸ್ಥೆಗಳಲ್ಲಿ ಗುರುತಿಸಿಕೊಂಡಿರುವವರು. ಪ್ರಸ್ತುತ ಯುವಜನ ಸಂಯುಕ್ತ ಮಂಡಳಿ ಸುಳ್ಯ ಇಲ್ಲಿ ನಿರ್ದೇಶಕರಾಗಿದ್ದು ಕಳೆದ ಬಾರಿ ಅತ್ಯುತ್ತಮ ಸಂಘಟಕ ಮತ್ತು ಕ್ರಿಯಾಶೀಲ ನಿರ್ದೇಶಕರಾಗಿ ಇವರನ್ನು ಮಂಡಳಿಯವರು ಗುರುತಿಸಿದ್ದರು.