ನಾಳೆ ಎ.7ರಂದು ಬೆಳಿಗ್ಗೆ ಸುಳ್ಯಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಮಳೆಗಾಗಿ ಪರ್ಜನ್ಯವೃಷ್ಟಿ ಸೀಯಾಳಾಭಿಷೇಕ

0

ಪ್ರಕೃತಿಯ ಉಷ್ಣತೆಯ ಪ್ರಖರವಾಗಿ ನೀರಿನ ತೀವ್ರ ಅಭಾವ ಇರುವುದರಿಂದ ಮಳೆಗಾಗಿ ಪರ್ಜನ್ಯವೃಷ್ಟಿ ಸೀಯಾಳಾಭಿಷೇಕವು ನಾಳೆ ಎ.7ರಂದು ಬೆಳಿಗ್ಗೆ ಸುಳ್ಯಸೀಮೆ ತೊಡಿಕಾನ ಶ್ರೀಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಜರುಗಲಿದೆ.

ಈ ದೇವತಾ ಕಾರ್ಯದಲ್ಲಿ ಸೀಮೆ ದೇವಸ್ಥಾನದ ಎಲ್ಲಾ ಭಗವದ್ಭಕ್ತರು ಭಾಗಿಯಾಗಬೇಕೆಂದು ದೇವಾಲಯದ ವತಿಯಿಂದ ತಿಳಿಸಲಾಗಿದೆ. ಶ್ರೀ ಮಲ್ಲಿಕಾರ್ಜುನ ದೇವರಿಗೆ ಅಭಿಷೇಕಕ್ಕೆ ಸೀಯಾಳ ತರುವವರು ಬೆಳಿಗ್ಗೆ 11 ಗಂಟೆಗೆ ಮುಂಚಿತವಾಗಿ ಕ್ಷೇತ್ರಕ್ಕೆ ತಲುಪಿಸುವಂತೆ ತಿಳಿಸಲಾಗಿದ್ದು, ಮಧ್ಯಾಹ್ನ 12.30ರ ಮಹಾಪೂಜೆಯ ನಂತರ ಸಾಮೂಹಿಕ ಪ್ರಾರ್ಥನೆ ನಡೆಯಲಿದೆ ಎಂದು ದೇವಸ್ಥಾನದ ವತಿಯಿಂದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.