ಪಂಜ: ಯುಗಾದಿ ಪ್ರಯುಕ್ತ ಶಾಲಾ ಮಕ್ಕಳಿಗೆ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ

0

ಗರಡಿ ಕ್ರಿಕೆಟರ್ಸ್ ನಾಗತೀರ್ಥ ಇವರ ವತಿಯಿಂದ ಯುಗಾದಿ ಹಬ್ಬದ ಪ್ರಯುಕ್ತ ಶಾಲಾ ಮಕ್ಕಳಿಗೆ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟವು ಪಂಜ ದೇವಾಲಯದ ಕೋಟಿ ಚೆನ್ನಯ ಕ್ರೀಡಾಂಗಣದಲ್ಲಿ ನಡೆಯಿತು.

ಹಿರಿಯ ಕ್ರಿಕೆಟ್ ಆಟಗಾರ ಪುರುಷೋತ್ತಮ ನಾಗತೀರ್ಥ ಪಂದ್ಯಾಕೂಟವನ್ನು ಉದ್ಘಾಟಿಸಿದರು.
ನಾಗತೀರ್ಥ ಮಿತ್ರ ಮಂಡಲದ ಕಾರ್ಯದರ್ಶಿ ದೇವಿಪ್ರಸಾದ್ ಗುಂಡಡ್ಕ ,ಆಶೀರ್ವಾದ್ ಅಲೆಕ್ಕಾಡಿಯ ಹಿರಿಯ ಆಟಗಾರ ಐತ್ತಪ್ಪ ಅಲೆಕ್ಕಾಡಿ ,ಷಣ್ಮುಖ ಕಲ್ಲಾಜೆ ಉಪಸ್ಥಿತರಿದ್ದರು.

ಪ್ರಥಮ ಸ್ಥಾನವನ್ನು ಗರಡಿ ಕ್ರಿಕೆಟರ್ಸ್ ನಾಗತೀರ್ಥ, , ದ್ವಿತೀಯ ಸ್ಥಾನವನ್ನು ಅಟಲ್ ಜೀ ಕ್ರಿಕೆಟರ್ಸ್ ಕೂತ್ಕುಂಜ ಪಡೆದರು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ದೇವಿಪ್ರಸಾದ್ ಗುಂಡಡ್ಕ ವಹಿಸಿದ್ದರು ,ಪುರುಷೋತ್ತಮ ನಾಗತೀರ್ಥ , ಕೂತ್ಕುಂಜ ಶಿವಾಜಿ ಯುವಕ ಮಂಡಲದ ಪೂರ್ವಾಧ್ಯಕ್ಷ ಉಜ್ವಲ್ ಚಿದ್ಗಲ್, ಯುವ ತೇಜಸ್ಸು ಟ್ರಸ್ಟ್ ನ ಸಂಸ್ಥಾಪಕ ಆಶಿತ್ ಕಲ್ಲಾಜೆ ಹಾಗೂ ಐತ್ತಪ್ಪ ಅಲೆಕ್ಕಾಡಿ ವಿಜೇತರಿಗೆ ಬಹುಮಾನ ವಿತರಿಸಿದರು.