ಕಿಡಿಗೇಡಿಗಳಿಂದ ಚಂದ್ರಶೇಖರ ಪೇರಾಲುರವರ ಫೇಸ್‌ಬುಕ್ ಖಾತೆ ಹ್ಯಾಕ್

0


ದುಡ್ಡಿಗಾಗಿ ಮಿತ್ರರಿಗೆ ಸಂದೇಶ ರವಾನೆ


ಕನ್ನಡ ಸಾಹಿತ್ಯ ಪರಿಷತ್ ಸುಳ್ಯ ತಾಲೂಕು ಘಟಕದ ಅಧ್ಯಕ್ಷ ಚಂದ್ರಶೇಖರ ಪೇರಾಲುರವರ ಫೇಸ್‌ಬುಕ್ ಖಾತೆಯಲ್ಲಿರುವ ಅವರ ಫೊಟೋವನ್ನು ಬಳಸಿ ನಕಲಿ ಖಾತೆ ಸೃಷ್ಟಿಸಿರುವ ಕಿಡಿಗೇಡಿಗಳು ಅದರಿಂದ ಪೇರಾಲುರವರ ಮಿತ್ರರಿಗೆ ಹಣಕ್ಕಾಗಿ ಸಂದೇಶ ಕಳುಹಿಸುತ್ತಿರುವ ಘಟನೆ ವರದಿಯಾಗಿದೆ.
ಸುಳ್ಯದ ಪಿ.ಎಸ್.ಗಂಗಾಧರ್, ಬೆಳ್ಳಾರೆಯ ಎಂ. ಮಾಧವ ಗೌಡ ಮೊದಲಾದವರಿಗೆ ಈ ರೀತಿ ಹಣಕ್ಕಾಗಿ ಸಂದೇಶ ಬಂದಿದ್ದು, ಅವರು ಪೇರಾಲುರನ್ನು ಸಂಪರ್ಕಿಸಿ ವಿಚಾರಿಸಿದಾಗ ತಾನು ಆ ರೀತಿಯ ಮನವಿಗಳನ್ನು ಕಳುಹಿಸಿಲ್ಲವೆಂದು ಪೇರಾಲು ತಿಳಿಸಿದರೆಂದು ತಿಳಿದು ಬಂದಿದೆ.