ಐವರ್ನಾಡು : ದಿ.ಎನ್.ಎಂ.ಬಾಲಕೃಷ್ಣ ಗೌಡರ 97 ನೇ ಜನ್ಮ ದಿನಾಚರಣೆ : ಪುತ್ಥಳಿಗೆ ಮಾಲಾರ್ಪಣೆ

0

ದಿ.ಎನ್.ಎಂ.ಬಾಲಕೃಷ್ಣ ಗೌಡರವರ ಕೊಡುಗೆ ಅಪಾರ – ಎಸ್.ಎನ್.ಮನ್ಮಥ

ಸಾಮಾಜಿಕ,ಧಾರ್ಮಿಕ,
ಮುಂದಾಳು ಐವರ್ನಾಡಿನ ಪಾಲೆಪ್ಪಾಡಿ ದಿ.ಎನ್.ಎಂ.ಬಾಲಕೃಷ್ಣ ಗೌಡರ 97 ನೇ ಜನ್ಮದಿನಾಚರಣೆ ಎ.11 ರಂದು ನಡೆಯಿತು.
ಬಾಲಕೃಷ್ಣ ಗೌಡರ ಪುತ್ರಿ ಜ್ಯೋತ್ಸ್ನಾ ಪಾಲೆಪ್ಪಾಡಿಯವರು ದಿ.ಎನ್.ಎಂ.ಬಾಲಕೃಷ್ಣ ಗೌಡರ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು.
ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕ ಹಾಗೂ ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಎಸ್.ಎನ್. ಮನ್ಮಥರವರು ಮಾತನಾಡಿ ದಿ.ಎನ್.ಎಂ.ಬಾಲಕೃಷ್ಣ ಗೌಡರ ಜನ್ಮದಿನಾಚರಣೆ ಯನ್ನು ಪ್ರತೀ ವರ್ಷದಂತೆ ಈ ವರ್ಷವೂ ಸಹಕಾರಿ ಸಂಘ, ಗ್ರಾ.ಪಂ.ಹಾಗೂ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಆಚರಣೆ ಮಾಡುತ್ತಿದ್ದೇವೆ.ಬಾಲಕೃಷ್ಣ ಗೌಡರವರು ಗ್ರಾಮಕ್ಕೆ ಹಾಗೂ ತಾಲೂಕಿಗೆ ಹಲವಾರು ಕೊಡುಗೆಗಳನ್ನು ನೀಡಿದ್ದಾರೆ.ರಾಜಕೀಯ,ಧಾರ್ಮಿಕ,ಸಾಮಾಜಿಕ ಕ್ಷೇತ್ರದಲ್ಲಿ ತೊಡಗಿಕೊಂಡಿದ್ದ ಇವರ ಕೊಡುಗೆ ಅಪಾರವಾದುದು ಎಂದು ಹೇಳಿದರು.
ಬಳಿಕ ಬಾಲಕೃಷ್ಣ ಗೌಡರ ಪುತ್ಥಳಿಗೆ ಪುಷ್ಪಾರ್ಚನೆ ಮಾಡಿದರು.


ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಚ ಬಾಲಕೃಷ್ಣ ಕೀಲಾಡಿ, ಸಹಕಾರಿ ಸಂಘದ ನಿರ್ದೇಶಕರಾದ ವಾಸುದೇವ ನಿಡುಬೆ,ಪುರಂದರ ಎಸ್, ಹಾಗೂ ಸಂಘದ ಪ್ರಭಾರ ಮುಖ್ಯಕಾರ್ಯನಿರ್ವಹಣಾಧಿಕಾರಿ ದೀಕ್ಷಿತ್ ಮಿತ್ತಮೂಲೆ, ಹಿರಿಯರಾದ ನೆಕ್ರೆಪ್ಪಾಡಿ ಕೃಷ್ಣಪ್ಪ ಗೌಡ, ಸಂಘದ ಸಿಬ್ಬಂದಿ ವರ್ಗದವರು,ಗ್ರಾಮ ಪಂಚಾಯತ್ ಸದಸ್ಯರು,ಸಂಘ ಸಂಸ್ಥೆಗಳ ಪದಾಧಿಕಾರಿಗಳು,ಗ್ರಾಮಸ್ಥರು ಉಪಸ್ಥಿತರಿದ್ದು ಪುಷ್ಪಾರ್ಚನೆ ಮಾಡಿದರು.ನಿರ್ದೇಶಕ ಸತೀಶ ಎಡಮಲೆ ವಂದಿಸಿದರು.