ಎಸ್ಸೆಸ್ಸೆಫ್, ಎಸ್. ವೈ. ಎಸ್, ಮುಸ್ಲಿಂ ಜಮಾಅತ್ ಕಲ್ಲುಗುಂಡಿ ವತಿಯಿಂದ ಮಹ್ಲರತುಲ್ ಬದ್ರಿಯಾ ಮಜ್ಲಿಸ್ ಮತ್ತು ಬೀಳ್ಕೊಡುಗೆ ಕಾರ್ಯಕ್ರಮ

0

ಎಸ್ಸೆಸ್ಸೆಫ್, ಎಸ್. ವೈ. ಎಸ್ ಮತ್ತು ಕರ್ನಾಟಕ ಮುಸ್ಲಿಂ ಜಮಾಅತ್ ಕಲ್ಲುಗುಂಡಿ ಯೂನಿಟ್ ವತಿಯಿಂದ, ಮಹ್ಲರತುಲ್ ಬದ್ರಿಯಾ ಮಜ್ಲಿಸ್ ಮತ್ತು ಕೊಯನಾಡು ಮಸೀದಿ ಖತೀಬರಾಗಿ ಸೇವೆ ಸಲ್ಲಿಸಿ ವಿರಮಿಸುವ, ಈ ಬಾರಿ ಹಜ್ ಯಾತ್ರೆ ಕೈಗೊಳ್ಳಲಿರುವ ಹಮೀದ್ ಅಂಜದಿ, ಸದರ್ ಮುಅಲ್ಲಿಂ ಆಗಿ ಸೇವೆ ಸಲ್ಲಿಸಿದ ಹಂಝ ಸಅದಿಯವರಿಗೆ ಬೀಳ್ಕೊಡುಗೆ ಸಮಾರಂಭ ನಡೆಯಿತು. ವಿದೇಶದಿಂದ ಊರಿಗೆ ಆಗಮಿಸಿರುವ ಎಸ್ಸೆಸ್ಸೆಫ್ ಕಲ್ಲುಗುಂಡಿ ಶಾಖೆಯ ಸಹಕಾರಿ ಶಾಕಿರ್ ಶೈನ್ ರವರಿಗೆ ಸ್ಮರಣಿಕೆ ನೀಡಿ ಸುನ್ನೀ ಸೆಂಟರ್ ಗೆ ಸ್ವಾಗತಿಸಲಾಯಿತು.

ಕೆ. ಸಿ. ಎಫ್. 10 ನೇ ವಾರ್ಷಿಕ ಸಮ್ಮೇಳನದ ಪೋಸ್ಟರ್ ಪ್ರದರ್ಶನ, ಸಾಂತ್ವನ ಕಾರ್ಯಾಚರಣೆಗಾಗಿ ಟಿ ಶರ್ಟ್ ಲಾಂಚಿಂಗ್ ಮಾಡಲಾಯಿತು.

ಸೈದಲವಿ ಕೊಯನಾಡು ಉದ್ಘಾಟಿಸಿದ ಸಭಾಕಾರ್ಯಕ್ರಮದಲ್ಲಿ ದೇವರಕೊಲ್ಲಿ ಉಸ್ತಾದರಾದ ಅಬ್ದುಲ್ ಜಲೀಲ್ ಸಖಾಫಿ ಮುಖ್ಯ ಭಾಷಣ ಮಾಡಿದರು. ಉಮರಾ ಪ್ರಮುಖರಾದ ಅಬ್ಬಾಸ್ ಹಾಜಿ ಸಂಟ್ಯಾರ್ ಸಹಿತ ಊರಿನ ಗಣ್ಯರು ಉಸ್ಥಿತರಿದ್ದರು. ಸಂಪಾಜೆ, ಕೊಯನಾಡು, ಕಲ್ಲುಗುಂಡಿಯ ಹಲವಾರು ಕಾರ್ಯಕರ್ತರು ಭಾಗಿಯಾಗದರು. ಎ.ಎಂ.ಫೈಝಲ್ ಝುಹ್ರಿ ಸ್ವಾಗತಿಸಿ, ಸ್ವಾದಿಕ್ ಕಾರ್ಯಕ್ರಮ ನಿರೂಪಿಸಿದರು.