ಮೈಂದೂರು ಮನೆಯಲ್ಲಿ ವಿಷ್ಣುಮೂರ್ತಿ ಮತ್ತು ‌ಉಪ ದೈವಗಳ ಕೋಲ

0

ಆಲೆಟ್ಟಿ ಗ್ರಾಮದ ಮೈಂದೂರು ದಿ.ವಿಶ್ವನಾಥ ಗೌಡ ಕುಡೆಕಲ್ಲು ರವರ ಮನೆಯಲ್ಲಿ ಶ್ರೀ ವಿಷ್ಣುಮೂರ್ತಿ ದೈವ ಹಾಗೂ ಉಪದೈವಗಳ ಕೋಲವು ಎ.11 ಮತ್ತು 12 ರಂದು ಜರುಗಿತು.

ಎ.11 ರಂದು ಬೆಳಗ್ಗೆ ಗಣಪತಿ ಹವನ, ಸಂಜೆ ಕುಡೆಕಲ್ಲು ಐನ್ ಮನೆಯಿಂದ ದೈವದ ಭಂಡಾರ ತಂದು ಶ್ರೀ ದೈವಗಳ ತೊಡಂಞಲ್ ನಡೆಯಿತು.

ರಾತ್ರಿ ಶ್ರೀ ವಿಷ್ಣುಮೂರ್ತಿ ದೈವದ ಕುಲ್ಚಾಟವು ನಡೆದು ಮರುದಿನ ಬೆಳಗ್ಗೆ ಪೊಟ್ಟನ್ ದೈವದ ಕೋಲ ಹಾಗೂ ಶ್ರೀ ರಕ್ತೇಶ್ವರಿ ಮತ್ತು ಶ್ರೀ ವಿಷ್ಣುಮೂರ್ತಿ ದೈವದ ನರ್ತನ ಸೇವೆಯಾಗಿ ಪ್ರಸಾದ ವಿತರಣೆ ಹಾಗೂ ಅನ್ನ ಸಂತರ್ಪಣೆಯಾಯಿತು.

ಕುಡೆಕಲ್ಲು ಕುಟುಂಬದ ಹಿರಿಯರಾದ ವಾಸುದೇವ ಗೌಡ ಕುಡೆಕಲ್ಲು ಹಾಗೂ ತರವಾಡು ದೈವಸ್ಥಾನದ ಆಡಳ್ತೆದಾರ ಬಿಪಿನ್ ಕುಡೆಕಲ್ಲು ಮತ್ತು ಕುಟುಂಬಸ್ಥರು ಮತ್ತು ಊರಿನ ಭಕ್ತಾದಿಗಳು ಭಾಗವಹಿಸಿದರು.