ಗೂನಡ್ಕ ಬಳಿ ಹೋರಿಗೆ ಢಿಕ್ಕಿ ಹೊಡೆದ ಅಪರಿಚಿತ ವಾಹನ

0

ಗೂನಡ್ಕ ತೆಕ್ಕಿಲ್ ಸ್ಕೂಲ್ ಬಳಿ ರಸ್ತೆ ಬದಿಯಲ್ಲಿ ನಿಂತಿದ್ದ ಹೋರಿಗೆ ಅಪರಿಚಿತ ವಾಹನವೂಂದು ಢಿಕ್ಕಿ ಹೊಡೆದು ಕಣಿಗೆ ಬಿದ್ದು ಹೊರಳಾಡುತ್ತಿದ್ದ ಸಂದರ್ಭ ಸ್ಥಳೀಯರು ಅದನ್ನು ರಕ್ಷಿಸಿದ ಘಟನೆ ವರದಿಯಾಗಿದೆ.

ವಿಜಯ ಇರ್ನೆ ,ನವೀನ ಇರ್ನೆ , ಚಂದ್ರಶೇಖರ ಎಸ್ .ಕೆ ಸುಶಾಂತ್ ಹಾಗೂ ಕೃಷ್ಣ ಬೆಟ್ಟ ಸೇರಿ ಗೂನಡ್ಕ ದಾಮೋದರ ಮಾಸ್ಟರ್ ಮನೆಯಿಂದ ಬಳ್ಳಿಯನ್ನು ತಂದು ಅದನ್ನು ಮೇಲಕ್ಕೆ ಎತ್ತಿ ರಕ್ಷಿಸಿದ್ದಾರೆ.

ಸೊಂಟಕ್ಕೆ ಬಲವಾಗಿ ಪೆಟ್ಟು ಬಿದ್ದ ಹೋರಿ ಚೇತರಿಸಿಕೊಳ್ಳುತ್ತಿದೆ.

ರಾಧಮ್ಮ ಮತ್ತು ಮನೆಯವರು ನೀರು ಹಾಗೂ ಬಾಳೆಹಣ್ಣು ಹೋರಿಗೆ ನೀಡಿ ಸಹಕರಿಸಿದರು.