ಕೊಡಗು ಸಂಪಾಜೆ : ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಂಪಾಜೆ ಹೋಬಳಿ ಸಮಿತಿಯ ವತಿಯಿಂದ ಡಾ.ಬಿ.ಆರ್ ಅಂಬೇಡ್ಕರ್ ಅವರ 133 ನೇ ಜನ್ಮ ದಿನಾಚರಣೆ

0

ಕೊಡಗು ಸಂಪಾಜೆ ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ) ಸಂಪಾಜೆ ಹೋಬಳಿ ಸಮಿತಿಯ ವತಿಯಿಂದ ಡಾ.ಬಿ.ಆರ್ ಅಂಬೇಡ್ಕರ್ ಅವರ 133 ನೇ ಜನ್ಮ ದಿನಾಚರಣೆ ಸಂಪಾಜೆ ಗ್ರಾಮದ ಚೆಡಾವು ಅಂಬೇಡ್ಕರ್ ಕಾಲೋನಿಯಲ್ಲಿ ಏ .14 ಆಚರಿಸಲಾಯಿತು.

ಕಾರ್ಯಕ್ರಮ ಉದ್ಘಾಟಿಸಿ,ಮಾತನಾಡಿದ ಸಂಪಾಜೆ ಗ್ರಾಮ ಪಂಚಾಯತ್ ಸದಸ್ಯರಾದ ಪಿ.ಎಲ್ ಸುರೇಶ್ , ಬಾಬಾ ಸಾಹೇಬರು ಯಾವುದೇ ಜಾತಿ ಜನಾಂಗಕ್ಕೆ ಸೀಮಿತರಲ್ಲ, ಅವರು ವಿಶ್ವ ರತ್ನ, ಈ ದೇಶದ ಮಹಾನಾಯಕ, ಅವರು ಬರೆದಂತಹ ಸಂವಿಧಾನವೇ ಇಂದು ಈ ದೇಶದ ಆಧಾರಸ್ತಂಭವಾಗಿದೆ.ಇಂದು ಅವರ 133 ನೇ ಜನ್ಮ ದಿನಾಚರಣೆಯನ್ನು ಸಂಪಾಜೆಯಲ್ಲೂ ಆಚರಿಸುತ್ತಿರುವುದು ಸಂತೋಷದ ವಿಚಾರ ಎಂದರು.ಮುಖ್ಯ ಅತಿಥಿಗಳಾಗಿ ಸಮಾಜ ಸೇವಕರಾದ ತಿರುಮಲ ಸೋನ ಭಾಗಿಯಾದರು.ಕಾರ್ಯಕ್ರಮದಲ್ಲಿ ಮುಖಂಡರಾದ, ಶ್ರೀ ಬಾಬು ಹೆಚ್.ಎಂ,ಶ್ರೀ ಸುಂದರ, ಹುಕ್ರಪ್ಪ, ನಾರಾಯಣ, ಶ್ರೀ ಮೋಹನ್, ಮಾಧವ, ಗಣೇಶ್, ನಾಗೇಶ್, ಶ್ರೀಮತಿ ಗೌರಿ, ಸೀತಮ್ಮ, ಶ್ರೀಮತಿ ಕಮಲ, ಮೀನಾಕ್ಷಿ, ಅಶ್ವಿನಿ, ಶ್ರೀಮತಿ ಚಂದ್ರಾವತಿ, ವೇದಾವತಿ, ಪುನೀತ್, ತೀರ್ಥರಾಮ, ಸಂತೋಷ, ಕು.ಹರಿಣಾಕ್ಷಿ, ಭಾಗವಹಿಸಿದ್ದರು. ಸಂತೋಷ್ ಕುಮಾರ್ ಸಂಪಾಜೆ, ಸ್ವಾಗತಿಸಿ, ವಂದಿಸಿದರು.