ಎ. 15: ನಿಂತಿಕಲ್ಲಿನಲ್ಲಿ ಗ್ರಾಮಜನ್ಯ ರೈತ ಉತ್ಪಾದಕ ಕಂಪನಿಯ ಶಾಖೆ ಶುಭಾರಂಭ

0

ಗ್ರಾಮಜನ್ಯ ರೈತ ಉತ್ಪಾದಕ ಕಂಪನಿಯ ಶಾಖೆ ನಿಂತಿಕಲ್ಲಿನ ಬಿ.ಕೆ. ಸಂಕೀರ್ಣದಲ್ಲಿ ಎ. 15ರಂದು ಶುಭಾರಂಭಗೊಳ್ಳಲಿದೆ.
ಗ್ರಾಮಜನ್ಯ ಸಲಹಾ ಸಮಿತಿ ಸದಸ್ಯ, ಮಾಜಿ ವಿಧಾನ ಪರಿಷತ್ ಸದಸ್ಯ ಅಣ್ಣಾ ವಿನಯಚಂದ್ರ ಸಂಸ್ಥೆಯನ್ನು ಉದ್ಘಾಟಿಸಲಿದ್ದಾರೆ. ಗ್ರಾಮಜನ್ಯ ರೈತ ಉತ್ಪಾದಕ ಕಂಪನಿಯ ಅಧ್ಯಕ್ಷ ಮೂಲಚಂದ್ರ ಕೆ ಸಭಾಧ್ಯಕ್ಷತೆ ವಹಿಸಲಿದ್ದಾರೆ. ಸಲಹಾ ಸಮಿತಿ ಸದಸ್ಯ ರಾಧಾಕೃಷ್ಣ ರಾವ್ ಯು, ಕೇರ್ಪಡ ಶ್ರೀ ಮಹಿಷಮರ್ಧಿನಿ ದೇವಸ್ಥಾನವನ್ನು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಸಂತ ನಡುಬೈಲು ಮತ್ತು ಪ್ರಗತಿಪರ ಕೃಷಿಕ ಡಾ. ಪಿ. ರಾಮಚಂದ್ರ ಭಟ್ ಗೌರವ ಉಪಸ್ಥಿತರಿರಲಿದ್ದಾರೆ. ಗ್ರಾಮಜನ್ಯ ರೈತ ಉತ್ಪಾದಕ ಸಂಸ್ಥೆಯಲ್ಲಿ 12 ಪ್ಯಾರಾಮೀಟರ್ ಮೂಲಕ ಮಣ್ಣು ಪರೀಕ್ಷೆ, ಮಣ್ಣಿನ ಗುಣಕ್ಕೆ ಅನುಗುಣವಾದ ಸಾವಯವ ಗೊಬ್ಬರ ಪೂರೈಕೆ, ಜೇನು ಕೃಷಿಗೆ ಬೇಕಾದ ಪೆಟ್ಟಿಗೆ ಇತ್ಯಾದಿ ಪೂರಕ ಪರಿಕರಗಳು, ಜೇನು ತುಪ್ಪ, ಜೇನಿನ ಮೌಲ್ಯ ವರ್ಧಿತ ಉತ್ಪನ್ನಗಳು ಗ್ರಾಮಜನ್ಯ ಸಂಸ್ಥೆಯಲ್ಲಿ ಲಭ್ಯವುರುವುದಾಗಿ ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.