ಸಂಪಾಜೆಯಲ್ಲಿ ಇಂದು ಸಂಜೆ ಪ್ರಗತಿಪರ ಕೃಷಿಕ ಗೋಪಾಲಕೃಷ್ಣ ಅಂಬೆಕಲ್ಲು ಅಂತಿಮ ದರ್ಶನ ಹಾಗೂ ಅಂತ್ಯಸಂಸ್ಕಾರ ಕಾರ್ಯ

0

ಪ್ರಗತಿಪರ ಕೃಷಿಕರಾಗಿದ್ದ ಸಂಪಾಜೆಯ ಅಂಬೇಕಲ್ಲು ಗೋಪಾಲಕೃಷ್ಣ ಅವರು ಎ.15ರಂದು ರಾತ್ರಿ ಹೃದಯಾಘಾತದಿಂದ ಮೃತಪಟ್ಟಿದ್ದು, ಅವರ ಮೃತದೇಹದ ಅಂತಿಮದರ್ಶನ ಹಾಗೂ ಅಂತ್ಯಸಂಸ್ಕಾರ ಕಾರ್ಯವು ಇಂದು ಸಂಜೆ 4 ಗಂಟೆಯ ಬಳಿಕ ಸಂಪಾಜೆಯಲ್ಲಿ ನಡೆಯಲಿದೆ ಎಂದು ಅವರ ಕುಟುಂಬ ಮೂಲ ತಿಳಿಸಿದೆ.

ಗೋಪಾಲಕೃಷ್ಣ ಅವರ ಪುತ್ರ ಸೃಷ್ಟಿವ್ರತ ಅವರ ಕುಟುಂಬ ಆಸ್ಟ್ರೇಲಿಯಾದಿಂದ ಬಂದ ಬಳಿಕ ಇಂದು ಬೆಳಿಗ್ಗೆ ಅಂತಿಮ ವಿಧಿವಿಧಾನ ಕಾರ್ಯ ನಡೆಯಲಿದೆ ಎಂದು ತೀರ್ಮಾನಿಸಲಾಗಿತ್ತು. ಆದರೆ ಅವರ ಪ್ರಯಾಣಿಸುತ್ತಿರುವ ವಿಮಾನ ಬರಲು ಸ್ವಲ್ಪ ವಿಳಂಬದ ಕಾರಣದಿಂದ ಅವರು ಬಂದ ಬಳಿಕ ಇಂದು ಸಂಜೆ ಅಂತ್ಯಸಂಸ್ಕಾರ ಕಾರ್ಯ ನಡೆಯಲಿದೆ ಎಂದು ತಿಳಿದುಬಂದಿದೆ.