ಬಂಗ್ಲೆಗುಡ್ಡೆ ಶ್ರೀ ನಾಗಬ್ರಹ್ಮ ಆದಿ ಮೊಗೇರ್ಕಳ ದೈವಸ್ಥಾನ ಪುನರ್ ಪ್ರತಿಷ್ಠಾ ಕಾರ್ಯಕ್ರಮ

0

ಕೆಪಿಸಿಸಿ ಪ್ರ.ಕಾರ್ಯದರ್ಶಿ ಮಮತಾ ಗಟ್ಟಿ ಭೇಟಿ- ವಿಶೇಷ ಪ್ರಾರ್ಥನೆ

ಸುಳ್ಯ ಬೀರಮಂಗಲ – ಬಂಗ್ಲೆಗುಡ್ಡೆ ಯಲ್ಲಿ ಶ್ರೀ ನಾಗಬ್ರಹ್ಮ ಆದಿ ಮೊಗೇರ್ಕಳ ದೈವಸ್ಥಾನದಲ್ಲಿ ಶ್ರೀ ಮೊಗೇರ ದೈವಗಳು, ಶ್ರೀ ತನ್ನಿಮಾನಿಗ, ಶ್ರೀ ಗುಳಿಗ ಮತ್ತು ಶ್ರೀ ಕೊರಗ ತನಿಯ ದೈವಗಳ ಪುನರ್ ಪ್ರತಿಷ್ಠಾ ಕಾರ್ಯಕ್ರಮ ಎ.೧೬ ರಿಂದ ಎ.೧೮ ರವರೆಗೆ ನಡೆಯಿತು.

ಈ ಸಂದರ್ಭದಲ್ಲಿ ದೈವಸ್ಥಾನಕ್ಕೆ ಭೇಟಿ ನೀಡಿದ ಕೆಪಿಸಿಸಿ ಪ್ರ. ಕಾರ್ಯದರ್ಶಿ ಮಮತಾ ಗಟ್ಟಿಯವರು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಕಾಂಗ್ರೆಸ್ ಪಕ್ಷದ ಮುಖಂಡರುಗಳಾದ ಪಿ.ಸಿ.ಜಯರಾಮ, ಎಂ.ವೆಂಕಪ್ಪ ಗೌಡ, ಶ್ರೀಮತಿ ರಾಜೀವಿ ಆರ್.ರೈ, ಸಂಶುದ್ದೀನ್ ಎಸ್.ಅರಂಬೂರು, ಸದಾನಂದ ಮಾವಜಿ, ಸುಜಯ ಕೃಷ್ಣ, ಜೂಲಿಯಾನ ಕ್ರಾಸ್ತಾ ಮೊದಲಾದವರು ಉಪಸ್ಥಿತರಿದ್ದರು.