ಶ್ರೀ ಕೇಶವ ಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದ ಸಂಸ್ಕಾರ ವಾಹಿನಿ ಶಿಬಿರ ಸಮಾಪನ

0

ಸುಳ್ಯದ ವಿದ್ಯಾನಗರದಲ್ಲಿರುವ ಶ್ರೀ ಕೇಶವ ಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದಲ್ಲಿ ಎ.13 ರಂದು ಆರಂಭಗೊಂಡ ಸಂಸ್ಕಾರ ವಾಹಿನಿ ಶಿಬಿರ – 2024 ರ ಸಮಾಪನಾ ಸಮಾರಂಭ ಎ.18 ರಂದು ನಡೆಯಿತು.
ಸಂಸ್ಕಾರ ವಾಹಿನಿ ಶಿಬಿರದ ಸಂಚಾಲಕಿ ಶ್ರೀಮತಿ ನಮಿತಾ ರಾವ್ ಸಭಾಧ್ಯಕ್ಷತೆ ವಹಿಸಿದ್ದರು. ಶ್ರೀಮತಿ ಶಶಿಕಲಾ ಶುಭಕರ ರಾವ್ ಸಮಾಪನ ಭಾಷಣಗೈದರು. ಶ್ರೀಮತಿ ಶಕುಂತಳಾ ದೇವದಾಸ್ ಮುಖ್ಯ ಅತಿಥಿಯಾಗಿದ್ದರು.


ಪೋಷಕರ ಪರವಾಗಿ ಶ್ರೀಮತಿ ಮಧುರ ಜಗದೀಶ್ ಅನಿಸಿಕೆ ವ್ಯಕ್ತಪಡಿಸಿದರು. ಶಿಬಿರಾರ್ಥಿಗಳಾದ ಕು.ಮೇಘಾ ಜೆ., ಆತ್ಮಿಕಾ, ಪ್ರಮಿತ್ ಜೆ.ರೈ, ಕುಶಲ್, ಕೌಶಿಕ್ ಅನಿಸಿಕೆ ವ್ಯಕ್ತಪಡಿಸಿದರು.
ಶ್ರೀದೇವಿ ನಾಗರಾಜ ಭಟ್ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಶಿಬಿರದ ನಿರ್ದೇಶಕಿ ಜಯಶ್ರೀ ವಸಂತ್ ಸ್ವಾಗತಿಸಿದರು. ವಗೆನಾಡು ಗೋಪಾಲಕೃಷ್ಣ ಭಟ್, ಶಿಬಿರದ ಸಹಸಂಚಾಲಕಿಯರಾದ ಸುನೀತ ಹರೀಶ್, ಜಲಜ ಚಂದ್ರಶೇಖರ್, ಸುಮಾ ಗೋಪಾಲಕೃಷ್ಣ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಸಂಸ್ಕೃತ ಶಿಕ್ಷಕಿ ಸಮತಾರನ್ನು ಮತ್ತು ಕಸೂತಿ ಶಿಕ್ಷಕಿ ಶ್ರೀಮತಿ ಮಮತಾರವರನ್ನು ಸನ್ಮಾನಿಸಲಾಯಿತು.
ಶ್ರೀಮತಿ ಸವಿತಾ ಪಾತಿಕಲ್ಲು ವಂದಿಸಿದರು.ಅಕ್ಷತಾ ನಾಯಕ್ ಕಾರ್ಯಕ್ರಮ ನಿರೂಪಿಸಿದರು.