ಸುಳ್ಯ ನಗರದಲ್ಲಿಬಿಜೆಪಿ ಕಾರ್ಯಕರ್ತರಿಂದ ಮತಯಾಚನೆ

0

ಲೋಕಸಭಾ ಚುನಾವಣೆಯ ಮಂಗಳೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ರವರ ಪರವಾಗಿ ಇಂದು ಸುಳ್ಯ ನಗರದಲ್ಲಿ ಬಿಜೆಪಿ ಮಂಡಲದ ನಾಯಕರು ಹಾಗೂ ಕಾರ್ಯಕರ್ತರು ಹಾಗೂ ಯುವ ಮೋರ್ಚಾದ ಕಾರ್ಯಕರ್ತರು ನಗರದ ಅಂಗಡಿ ಮುಂಗಟ್ಟುಗಳಿಗೆ ಭೇಟಿ ನೀಡಿ ಮತಯಾಚನೆ ನಡೆಸಿದರು.

ವಿಕಸಿತ ಭಾರತ ಮೋದಿ ಗ್ಯಾರಂಟಿ ಎಂಬ ಬಿಜೆಪಿ ಪರ ಯೋಜನೆಗಳ ವಿವರದ ಕರ ಪತ್ರವನ್ನು ಸಾರ್ವಜನಿಕರಿಗೆ ‌ವಿತರಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ನಂದನ್ ಮಲ್ಯ, ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ, ಯುವ ಮೋರ್ಚಾ ಅಧ್ಯಕ್ಷ ಶ್ರೀಕಾಂತ್ ಮಾವಿನಕಟ್ಟೆ, ಪ್ರಧಾನ ಕಾರ್ಯದರ್ಶಿ ವಿನಯಕುಮಾರ್ ಕಂದಡ್ಕ, ಕೋಶಾಧಿಕಾರಿ ಸುಭೋದ್ ಶೆಟ್ಟಿ ಮೇನಾಲ, ಶಕ್ತಿ ಕೇಂದ್ರದ ಪದಾಧಿಕಾರಿಗಳಾದ ಸುದರ್ಶನ ಪಾತಿಕಲ್ಲು, ಪ್ರದೀಪ್ ಕೊಲ್ಲರ ಮೂಲೆ, ಲತೀಶ್ ಗುಂಡ್ಯ, ಪ್ರಕಾಶ್ ಯಾದವ್, ನವೀನ್ ಎಲಿಮಲೆ
ಹಾಗೂ ಯುವ ಮೋರ್ಚಾ ದ ಕಾರ್ಯಕರ್ತರು ಭಾಗವಹಿಸಿದರು.