ಮದುವೆ ಕಾರ್ಯಕ್ರಮದಲ್ಲಿ ತಾಲೂಕು ಸ್ವೀಪ್ ಸಮಿತಿಯಿಂದ ಮತದಾನ ಜಾಗೃತಿ

0

ಸುಳ್ಯದ ಬಂಟರ ಭವನದಲ್ಲಿ ಎ.18ರಂದು ಜರುಗಿದ ಮದುವೆ ಕಾರ್ಯಕ್ರಮದಲ್ಲಿ ತಾಲೂಕು ಸ್ವೀಪ್ ಸಮಿತಿ ಅಧಿಕಾರಿಗಳು ತೆರಳಿ ಮತದಾನ ಜಾಗೃತಿ ಮೂಡಿಸಿದ್ದಾರೆ.

ಬಂಟರ ಭವನದಲ್ಲಿ ಜಾಲ್ಸೂರು ವಿನೋಬಾನಗರದ ಲಿಂಗಪ್ಪ ನಾಯ್ಕ್ ರ ಪುತ್ರ ಹೃಷಿತ್ ರ ವಿವಾಹವು ನೀಡ್ಪಳ್ಳಿ ಐತಪ್ಪ ನಾಯ್ಕರ ಪುತ್ರಿ ಪ್ರಣೀತರೊಂದಿಗೆ ನಡೆಯಿತು. ಮಧ್ಯಾಹ್ನ ಸುಳ್ಯದ ಸ್ವೀಪ್ ಸಮಿತಿ ಅಧಿಕಾರಿಗಳ ತಂಡ ಮದುವೆ ಕಾರ್ಯಕ್ರಮಕ್ಕೆ ಹೋಗಿ ಮತದಾನದ ಫಲಕ ನೀಡಿ ಮದುವೆ ಕಾರ್ಯಕ್ರಮದಲ್ಲಿ ಜಾಗೃತಿ‌ ಮೂಡಿಸಿದರು.

ತಂಡದಲ್ಲಿ ತಾ.ಪಂ ಇ.ಒ. ಪರಮೇಶ್, ನ.ಪಂ. ಮುಖ್ಯಾಧಿಕಾರಿ ಬಿ.ಎಂ.ಡಾಂಗೆ, ತಾ.ಪಂ. ಮ್ಯಾನೇಜರ್ ಹರೀಶ್ ಮೊದಲಾದವರ ತಂಡ ತೆರಳಿ ಜಾಗೃತಿ ಕಾರ್ಯಕ್ರಮ ನಡೆಸಿತು.