ನಟರಾಜ ನೃತ್ಯ ನಿಕೇತನ ತಂಡ ಕಲ್ಲುಗುಂಡಿ ಇದರ ವಿವಿಧ ಶಾಖೆಯ ವಿದ್ಯಾರ್ಥಿಗಳಿಂದ ಸಂಪಾಜೆ ಮತ್ತು ತೊಡಿಕಾನ ದೇವಸ್ಥಾನ ಜಾತ್ರೋತ್ಸವ ಕಾರ್ಯಕ್ರಮದಲ್ಲಿ ಭರತ ನೃತ್ಯ ವೈಭವ ಕಾರ್ಯಕ್ರಮ

0

ವಿದುಷಿ ಶ್ರೀಮತಿ ಇಂದುಮತಿ ನಾಗೇಶ್ ಎಕ್ಕೂರು, ಮಂಗಳೂರು ಇವರ ನಿರ್ದೇಶನದಲ್ಲಿ ನಟರಾಜ ನೃತ್ಯ ನಿಕೇತನ (ರಿ) ಕಲ್ಲುಗುಂಡಿ ಮತ್ತು ಇದರ ಶಾಖೆಗಳಾದ ಆರಂತೋಡು ಮತ್ತು ಸುಳ್ಯ ಶಾಖೆಯ ಶಿಷ್ಯ ವೃಂದದವರಿಂದ ಭರತ ನೃತ್ಯ ವೈಭವ
ಕಾರ್ಯಕ್ರಮ ಏ.11 ರಂದು ಸಂಪಾಜೆ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವದಲ್ಲಿ ಮತ್ತು ಏ.18ರಂದು ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಜಾತ್ರೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಡೆಯಿತು.

ತಂಡದ ಕಲ್ಲುಗುಂಡಿ, ಆರಂತೋಡು, ಸುಳ್ಯ ಶಾಖೆಯ ಸುಮಾರು 70 ಶಿಷ್ಯ ವೃಂದದವರು ಈ ನೃತ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಜನರ ಮೆಚ್ಚುಗೆಗಳಿಸಿದರು.