ಕಳಂಜ ಮಕ್ಕಳ ಹಬ್ಬ ಅದ್ವೈತ್ ಮಕ್ಕಳ ಬೇಸಿಗೆ ಶಿಬಿರ ಸಮಾರೋಪ

0

ಶ್ರೀ ವಿಷ್ಣುಮೂರ್ತಿ ಸೇವಾ ಟ್ರಸ್ಟ್ ಕಳಂಜ ಹಾಗೂ ಡಾನ್ಸ್ ಅಂಡ್ ಬೀಟ್ಸ್ ಬೆಳ್ಳಾರೆ ಸಹಯೋಗದಲ್ಲಿ ಮಕ್ಕಳ ಹಬ್ಬ ಕಳಂಜ 2024 ಅದ್ವೈತ್ ಮಕ್ಕಳ ಬೇಸಿಗೆ ಶಿಬಿರ ಏ.13 ರಂದು ವಿಷ್ಣು ನಗರದಲ್ಲಿ ಉದ್ಘಾಟನೆಗೊಂಡು ಎ. 19 ರಂದು ಸಮಾರೋಪ ನಡೆಯಿತು.

ವಿಷ್ಣುಮೂರ್ತಿ ಸೇವಾ ಸಮಿತಿ ಅಧ್ಯಕ್ಷ ಕರುಣಾಕರ ಶೆಟ್ಟಿ ನಾಲ್ಗುತ್ತು ಅಧ್ಯಕ್ಷತೆಯನ್ನು ವಹಿಸಿದ್ದರು.
ಮುಖ್ಯ ಅತಿಥಿಯಾಗಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ತೆಕ್ಕಿಲ, ಪುತ್ತೂರು ಇಲ್ಲಿನ ಮುಖ್ಯ ಶಿಕ್ಷಕಿ ಆಶಾ ಗಂಗಾಧರ ದಿಕ್ಸೂಚಿ ಭಾಷಣ ಮಾಡಿದರು.


ವೇದಿಕೆಯಲ್ಲಿ ಜೆಸಿಐ ಪೂರ್ವ ವಲಯಾಧಿಕಾರಿ ಪ್ರದೀಪ್ ಕುಮಾರ್ ರೈ ಪನ್ನೆ, ಶ್ರೀಮತಿ ಜಯಶೀಲ, ಕಲಾವಿಕಾಸದ ಸ್ಥಾಪಕಾಧ್ಯಕ್ಷ ರುಕ್ಮಯ್ಯ ಗೌಡ ಕಟ್ಟತ್ತಾರು, ಸಂಯೋಜಕರುಗಳಾದ ಸತೀಶ್ ಕಳಂಜ, ಜೀವನ್ ತಡಗಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಝಿ ಕನ್ನಡ ಡ್ರಾಮಾ ಜ್ಯೂನಿಯರ್ 5 ರೈ ಪೈನಲಿಸ್ಟ್ ರಿಶಿತ್ ರಾಜ್ ವಿಟ್ಲ, ಯೋಗಪಟು ಮೋನಿಶ್ ತಂಟೆಪ್ಪಾಡಿ ಮತ್ತು ವೆಂಕಪ್ಪ ನಾಯ್ಕ ಮಂಞನಕಾನ ಇವರನ್ನು ಸನ್ಮಾನಿಸಲಾಯಿತು.
ಜಯರಾಮ ಉಮಿಕ್ಕಳ ಸ್ವಾಗತಿಸಿ, ಕಾರ್ಯ ಕ್ರಮ ನಿರೂಪಿಸಿದರು. ಜೀವನ್ ವಂದಿಸಿದರು.
ಶಿಬಿರದ ವಿದ್ಯಾರ್ಥಿಗಳು, ಪೋಷಕರು ಮತ್ತು ಊರವರು ಉಪಸ್ಥಿತರಿದ್ದರು.