ನಾಳೆ (ಎ.23) ಬೆಳಗ್ಗೆಯಿಂದ ಮಧ್ಯಾಹ್ನ ವರೆಗೆ ಪವರ್ ಸಪ್ಲೈ ಇಲ್ಲ : ಮೆಸ್ಕಾಂ

0

ಎ.19ರಂದು ಸುರಿದ ಭಾರಿ ಗಾಳಿ ಮಳೆಗೆ ಕನಕಮಜಲು ಸುಣ್ಣಮೂಲೆ ಎಂಬಲ್ಲಿ 33kv ಲೈನ್ ನಲ್ಲಿ ವಿದ್ಯುತ್ ಕಂಬ ತುಂಡಾಗಿದ್ದು ತಾತ್ಕಾಲಿಕ ವ್ಯವಸ್ಥೆಯನ್ನು ಮಾಡಿಕೊಂಡು ವಿದ್ಯುತ್ ಸಂಪರ್ಕ ನೀಡಲಾಗಿತ್ತು.ಸಾರ್ವಜನಿಕರ ಸುರಕ್ಷತೆ ದೃಷ್ಟಿಯಿಂದ ಸದ್ರಿ ಮುರಿದ ಕಂಬವನ್ನು ಆದ್ಯತೆ ಮೇರೆಗೆ ಬದಲಾವಣೆ ಮಾಡಲಿರುವ ಕಾರಣ ಹಾಗೂ ದಿನಾಂಕ 26/04/2024ರಂದು ನಡೆಯುವ ಚುನಾವಣಾ ಸಂದರ್ಭದಲ್ಲಿ ಅಡಚಣೆ ರಹಿತ ನಿರಂತರ ವಿದ್ಯುತ್ ಪೂರೈಕೆ ಮಾಡುವ ಉದ್ದೇಶದಿಂದ 33kv ಸುಳ್ಯ ಲೈನ್ ನಲ್ಲಿ ನಿರ್ವಹಣಾ ಕೆಲಸವನ್ನು ಹಮ್ಮಿಕೊಂಡಿರುವ ಕಾರಣ ಎ.23ರಂದು ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 1:30ತನಕ ಸುಳ್ಯ ಉಪಕೇಂದ್ರದಿಂದ ಹೊರಡುವ ಎಲ್ಲಾ 11kv ಫೀಡರ್ ಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂಬುದಾಗಿ ಮೆಸ್ಕಾಂ ಪ್ರಕಟಣೆ ತಿಳಿಸಿದೆ.