ಸುಬ್ರಹ್ಮಣ್ಯ: ಉಪನ್ಯಾಸಕರೊಂದಿಗೆ ಮೊಬೈಲ್ ವಿಚಾರವಾಗಿ ಉದ್ಧಟತನದ ವರ್ತನೆ: ವಿದ್ಯಾರ್ಥಿ ಡಿಬಾರ್

0

ಕುಕ್ಕೆ ಸುಬ್ರಹ್ಮಣ್ಯ ಪದವಿ ಕಾಲೇಜಿನ ವಿದ್ಯಾರ್ಥಿ ಯೋರ್ವ ಕಾಲೇಜಿನ ಒಳಗೆ ಮೊಬೈಲ್ ಬಳಕೆ ಮಾಡಿದ ವಿಚಾರವಾಗಿ ಉಪನ್ಯಾಸಕರು ಪ್ರಶ್ನಿಸಿದಾಗ ಉದ್ಧಟತನದಿಂದ ವರ್ತಿಸಿದ ಕಾರಣ ವಿದ್ಯಾರ್ಥಿಯನ್ನು ಡಿಬಾರ್ ಮಾಡಿದ ಮತ್ತು ಠಾಣೆಯಲ್ಲಿ ಮುಚ್ಚಳಿಕೆ ಬರೆಸಿದ ಘಟನೆ ಸುಬ್ರಹ್ಮಣ್ಯದಿಂದ ವರದಿಯಾಗಿದೆ.

ಕಾಲೇಜಿನ ವಿದ್ಯಾರ್ಥಿ ಕಾಲೇಜು ಆವರಣದೊಳಗೆ ಮೊಬೈಲ್ ಬಳಸಿದ ಬಗ್ಗೆ ಉಪನ್ಯಾಸಕರು ಪ್ರಶ್ನಿಸಿದರೆನ್ನಲಾಗಿದೆ. ಈ ವೇಳೆ ಉಪನ್ಯಾಸಕರೊಂದಿಗೆ ಉದ್ದಟತನ ತೋರಿದ್ದು ಇದನ್ನು ಉಪನ್ಯಾಸಕರು ಠಾಣೆಗೆ ಪೋನ್ ಮಾಡಿ ತಿಳಿಸಿದ್ದರು. ಠಾಣೆಯಿಂದ ಪೊಲೀಸರು ಒಬ್ಬರು ಕಾಲೇಜಿಗೆ ಬಂದು ವಿದ್ಯಾರ್ಥಿಯನ್ನು ಕರೆದೊಯ್ದು ಮುಚ್ಚಳಿಕೆ ಬರೆಸಿ ಬಿಟ್ಟಿರುವುದಾಗಿ ತಿಳಿದು ಬಂದಿದೆ.

ವಿದ್ಯಾರ್ಥಿಯನ್ನು ತಾತ್ಕಾಲಿಕವಾಗಿ ಕಾಲೇಜಿನಿಂದ ಡಿಬಾರ್ ಮಾಡಲಾಗಿರುವುದಾಗಿ ತಿಳಿದು ಬಂದಿದೆ.