ದಿl ಯು. ಡಿ. ಶೇಖರ್ ರವರ 57ನೇ ಹುಟ್ಟುಹಬ್ಬ ಪುತ್ತೂರಿನ ಆಶ್ರಮದಲ್ಲಿ ಆಚರಣೆ

0

ಪಂಚಾಯತ್ ರಾಜ್ ವ್ಯವಸ್ಥೆ ಬಗ್ಗೆ ವಿಶೇಷ ಜ್ಞಾನ ಹೊಂದಿ ಪಂಚಾಯತ್ ರಾಜ್ ಕಣಜ ವೆಂದು ಹೆಸರು ಮಾಡಿದ್ದ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ದಿl ಯು. ಡಿ. ಶೇಖರ್ ರವರ 57ವರ್ಷ ದ ಹುಟ್ಟುಹಬ್ಬವನ್ನು ಮೇ.05 ರಂದು ಪುತ್ತೂರು ಪ್ರಜ್ಞಾ ಮಾನಸಿಕ ಅಸ್ವಸ್ಥ ಮತ್ತು ವಿಶಿಷ್ಟ ಚೇತನರ ಆಶ್ರಮದಲ್ಲಿ ಸಮಾಜಕ್ಕೆ ಮಾದರಿಯಾಗಿ ಆಚರಿಸಲಾಯಿತು.


ಆಶ್ರಮದಲ್ಲಿ ಕೇಕ್ ಕತ್ತರಿಸಿ ಸಿಹಿ ವಿತರಿಸಿ , ಧನ ಸಹಾಯ ಮಾಡಿ ವಿಶಿಷ್ಟವಾಗಿ ಹುಟ್ಟು ಹಬ್ಬ ಆಚರಿಸಿದರು. ಈ ಸಂದರ್ಭದಲ್ಲಿ ಯು. ಡಿ. ಶೇಖರ್ ರವರ ಪತ್ನಿ ಉಪ್ಪಿನಂಗಡಿ ಗ್ರಾಮ ಪಂಚಾಯತ್ ಕಾರ್ಯದರ್ಶಿ ಶ್ರೀಮತಿ ಗೀತಾ ಶೇಖರ್, ಪುತ್ರ ಪ್ರಫುಲ್, ಮಗಳು ಪ್ರಕೃತಿ ಹಾಗೂ ಆಶ್ರಮ ನಡೆಸುತ್ತಿರುವ ಅಣ್ಣಪ್ಪರವರು ಮತ್ತು ಅವರ ಮನೆಯವರು, ಆಶ್ರಮ ನಿವಾಸಿಗಳು ಹಾಜರಿದ್ದರು.