ಬೆಳ್ಳಿಪ್ಪಾಡಿ : ಕೃಷಿತೋಟಕ್ಕೆ ಕಾಡಾನೆ ದಾಳಿ

0

ಗಡಿಪ್ರದೇಶದ ಹಲವು ಕೃಷಿಕರ ಕೃಷಿ ತೋಟಗಳಲ್ಲಿ ಬೆಳೆನಾಶ

ಕಾಡಾನೆಗಳ ಹಿಂಡು ಕೃಷಿ ತೋಟಕ್ಕೆ ದಾಳಿ ನಡೆಸಿ, ಗಡಿಪ್ರದೇಶದ ಹಲವು ಕೃಷಿಕರ ಕೃಷಿ ಬೆಳೆ ನಾಶಗೊಳಿಸಿದ ಘಟನೆ ದೇಲಂಪಾಡಿ ಗ್ರಾಮದ ಬೆಳ್ಳಿಪ್ಪಾಡಿಯಲ್ಲಿ ಮೇ.21ರಂದು ರಾತ್ರಿ ಸಂಭವಿಸಿದೆ.

ಬೆಳ್ಳಿಪ್ಪಾಡಿಯ ಮೆನ್ನ ಎಂಬವಲ್ಲಿ ರಾತ್ರಿ ಕಾಡಾನೆಗಳು ಕೃಷಿತೋಟಕ್ಕೆ ನುಗ್ಗಿ ದಾಂಧಲೆ ನಡೆಸಿ, -ಮೆನ್ನದ ಗೋಪಾಲ ಪಾಟಾಳಿ, ರಮೇಶ್ ಭಟ್, ಆದಿತ್ಯ, ಶ್ರೀ ನಿಲಯ, ವಸಂತಗೌಡ, ಸುಧಾಕರ ರೈ, ಶಶಿಕುಮಾರ ರೈ,ಗಣೇಶ ಶರ್ಮಾ, ನಾರಾಯಣ ಪೂಜಾರಿ, ಜಗದೀಶ್ ರೈ ಮತ್ತಿತರರ ಕೃಷಿ ತೋಟಗಳಲ್ಲಿ ಬೆಳೆದ ಕೃಷಿ ಬೆಳೆಗಳನ್ನು ನಾಶಗೊಳಿಸಿರುವುದಾಗಿ ತಿಳಿದುಬಂದಿದೆ.