ಗಾಂಧಿನಗರ: ಹೊಸ ಆಟೋ ರಿಕ್ಷಕ್ಕೆ ಕಾರು ಡಿಕ್ಕಿ

0

ಎರಡು ವಾಹನಗಳು ಅಲ್ಪಸ್ವಲ್ಪ ಜಖಂ, ಸುಳ್ಯ ಠಾಣೆಯಲ್ಲಿ ದೂರು

ಗಾಂಧಿನಗರ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಶೋರೂಮಿನಿಂದ ತಂದ ಹೊಸ ಆಟೋರಿಕ್ಷಕೆ ಆಲ್ಟೊ ಕಾರು ಡಿಕ್ಕಿಯಾಗಿದ್ದು, ಎರಡು ವಾಹನಗಳು ಅಲ್ಪಸ್ವಲ್ಪ ಜಖಂಗೊಂಡ ಘಟನೆ ಇಂದು ಮಧ್ಯಾಹ್ನ ನಡೆದಿದೆ.

ಉಭರಡ್ಕ ನಿವಾಸಿ ಸತೀಶ್ ಎಂಬವರು ಹಳೆಗೇಟುರವರು ಶೋರೂಮಿನಿಂದ ಹೊಸ ಆಟೋರಿಕ್ಷವನ್ನು ಖರೀದಿಸಿ ಉಬರಡ್ಕಕ್ಕೆ ಹೋಗುವ ವೇಳೆ ಗಾಂಧಿನಗರ ರಸ್ತೆ ಬದಿಯಲ್ಲಿ ನಿಲ್ಲಿಸಿ ಪಕ್ಕದ ಪುಸ್ತಕದ ಅಂಗಡಿಗೆ ಪುಸ್ತಕ ತರಲೆಂದು ಹೋಗಿದ್ದರು. ಈ ವೇಳೆ ಗಾಂಧಿನಗರದ ಕಡೆಯಿಂದ ಬರುತ್ತಿದ್ದ ಉಬರಡ್ಕ ಗ್ರಾಮ ಪಂಚಾಯತಿ ಸದಸ್ಯ ಅನಿಲ್ ಬಳ್ಳಡ್ಕರು ಚಲಾಯಿಸಿಕೊಂಡು ಬರುತ್ತಿದ್ದ ಆಲ್ಟೊ ಕಾರು ರಿಕ್ಷಾಗೆ ಡಿಕ್ಕಿ ಹೊಡೆದಿದ್ದು, ಡಿಕ್ಕಿ ಸಂಭವಿಸಿದ ಬಳಿಕ ಕಾರು ಸವಾರ ನಿಲ್ಲಿಸದೆ ಮುಂದಕ್ಕೆ ಸಾಗಿ ಪೊಲೀಸ್ ಠಾಣೆಯಲ್ಲಿ ಕೊಂಡು ಹೋಗಿ ನಿಲ್ಲಿಸಿದ್ದಾರೆ. ಅಲ್ಲಿಗೆ ಬಂದ ಆಟೋ ಚಾಲಕ ಸತೀಶ್ ಠಾಣೆಗೆ ತೆರಳಿ ಘಟನೆಯ ಬಗ್ಗೆ ವಿವರವನ್ನು ತಿಳಿಸಿದ್ದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.