ಕುಕ್ಕೆ ಸುಬ್ರಹ್ಮಣ್ಯದ ರಸ್ತೆ ಮಾರ್ಗಸೂಚಿ ಹಾಗೂ ಪಾರ್ಕಿಂಗ್ ಸಮಾಲೋಚನಾ ಸಭೆ

0

ಪಾರ್ಕಿಂಗ್ ವ್ಯವಸ್ಥೆಯ ಪೂರ್ಣ ಮಾಹಿತಿ ಇಲ್ಲಿದೆ ನೋಡಿ…

ಕುಕ್ಕೆ ಸುಬ್ರಹ್ಮಣ್ಯದ ಗ್ರಾ.ಪಂ ಸಭಾ ಭವನದಲ್ಲಿ ರಸ್ತೆ ಮಾರ್ಗಸೂಚಿ ಹಾಗೂ ಪಾರ್ಕಿಂಗ್ ಸಮಸ್ಯೆ ಬಗ್ಗೆ ಸಮಾಲೋಚನಾ ಸಭೆ ಜೂ.೧೩ ರಂದು ನಡೆಯಿತು.

ಸುಬ್ರಹ್ಮಣ್ಯ ಪೊಲೀಸ್ ಠಾಣೆ, ಎಲ್ಲಾ ಇಲಾಖೆ ಅಧಿಕಾರಿಗಳು, ಸ್ಥಳೀಯ ಸಂಘಟನೆ ಸದಸ್ಯರು ಹಾಗೂ ಸುಬ್ರಹ್ಮಣ್ಯ ಗ್ರಾಮಸ್ಥರ ಸಮ್ಮುಖದಲ್ಲಿ ಸಭೆ ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಪ್ರಭಾರ ಇ. ಓ ಗೋವಿಂದ ನಾಯಕ್ ವಹಿಸಿದ್ದರು, ವೇದಿಕೆಯಲ್ಲಿ ಸುಬ್ರಹ್ಮಣ್ಯ ಪೊಲೀಸ್ ಠಾಣಾಧಿಕಾರಿ ಕಾರ್ತಿಕ್, ಸುಬ್ರಹ್ಮಣ್ಯ ಗ್ರಾಮ ಅಭಿವೃದ್ದಿ ಅಧಿಕಾರಿ ಮಹೇಶ್,ಸುಬ್ರಹ್ಮಣ್ಯ ಗ್ರಾ. ಪಂ.ಅಧ್ಯಕ್ಷೆ ಸುಜಾತಾ ಕಲ್ಲಾಜೆ, ಉಪಾಧ್ಯಕ್ಷ ವೆಂಕಟೇಶ್ ಎಚ್ ಎಲ್ ಲೋಕೋಪಯೋಗಿ ಇಲಾಖೆ ಎ. ಡಬ್ಲ್ಯೂ ಸೋಮ. ಬಿ, ಎ.ಎಸ್.ಐ ಕರುಣಾಕರ,
ಸುಬ್ರಹ್ಮಣ್ಯ ಮಾಸ್ಟರ್ ಪ್ಲಾನ್ ಸದಸ್ಯ ಸತೀಶ್ ಕುಜುಗೋಡು, ಪವನ್ ಎಂ.ಡಿ, ಲೋಲಕ್ಷಾ ಕೈಕಂಬ, ಕಾರ್ಯದರ್ಶಿ ಮೋನಪ್ಪ. ಡಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಗ್ರಾಮ ಪಂಚಾಯತ್ ಸದಸ್ಯ ಹರೀಶ್ ಇಂಜಾಡಿಯವರು ಮಾತನಾಡಿ ಸುಬ್ರಹ್ಮಣ್ಯ ಜನತೆ ಜನಸಾಮಾನ್ಯರು ದೂರದ ಊರುಗಳಿಂದ ಬರುವ ಭಕ್ತರಿಗೆ ಪಾರ್ಕಿಂಗ್ ವಿಚಾರದಲ್ಲಿ ಅನುಕೂಲ ಮಾಡಿಕೊಡಬೇಕು, ಇಲ್ಲಿ ಯಾರು ವೈಯಕ್ತಿಕವಾಗಿ ಈ ವಿಚಾರವನ್ನು ತೆಗೆದು ಕೊಳ್ಳದೆ ಸಾರ್ವಜನಿಕವಾಗಿ ಅನುಕೂಲ ಮಾಡಿ ಕೊಡಬೇಕು ಹಾಗೂ ಸಹಕರಿಸಬೇಕು, ಸಾರ್ವಜನಿಕರಿಗೆ ಸುಬ್ರಹ್ಮಣ್ಯ ದಲ್ಲಿ ಮೂಲಭೂತ ಸೌಕರ್ಯ ಆಗಲೇ ಬೇಕು ಎಂದರು.
ಸುಬ್ರಮಣ್ಯದ ಪಾರ್ಕಿಂಗ್ ಹಾಗೂ ರಸ್ತೆಯ ಸಮಸ್ಯೆ ಸರಿಪಡಿಸಲು ಜಿಲ್ಲಾಧಿಕಾರಿಗಳು ೨೦೧೫ರಲ್ಲಿ ಆದೇಶವನ್ನು ಮಾಡಿದ್ದಾರೆ.
ಇದನ್ನು ಕಾರ್ಯಗತಗೊಳಿಸಲು ಈ ವಿಚಾರದಲ್ಲಿ ನಡೆಯುವ ಮಹತ್ವದ ಸಭೆ ಇದಾಗಿದೆ ಎಂದರು.

ನಂತರ ಸಭೆಯನ್ನು ಉದ್ದೇಶಿಸಿ ಹೊಸ ರಸ್ತೆ ನಿಯಮ ಹಾಗೂ ಪಾರ್ಕಿಂಗ್ ಬಗ್ಗೆ ತಯಾರಿಸಿದ ನಕ್ಷೆಯನ್ನು ಪ್ರದರ್ಶಿಸಿ ಮಾಹಿತಿ ಹಾಗೂ ನಿಯಮಗಳನ್ನು ವಿವರಿಸಿದ ಸುಬ್ರಹ್ಮಣ್ಯ ಠಾಣಾಧಿಕಾರಿ ಕಾರ್ತಿಕ್
೨೦೧೫ರಲ್ಲಿ ಜಿಲ್ಲಾಧಿಕಾರಿಗಳ ಆದೇಶದಂತೆ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಎದುರಾಗುತ್ತಿರುವ ಪಾರ್ಕಿಂಗ್ ಸಮಸ್ಯೆ ಬಗ್ಗೆ ಮಾತನಾಡಿದರು.
ಎಸಿ ಹಾಗೂ ಡಿಸಿ ಕಚೇರಿಯಿಂದ ಈ ಬಗ್ಗೆ ಅಂತಿಮ ನಿರ್ಧಾರವನ್ನು ಕೇಳಿದ್ದಾರೆ.
ದಕ್ಷಿಣ ಕನ್ನಡ ಪೊಲೀಸ್ ವರಿಷ್ಠಾಧಿಕಾರಿಯವರು ಈ ಬಗ್ಗೆ ಒಂದು ಸಭೆಯನ್ನು ಮಾಡಿದ್ದರು. ಕುಕ್ಕೆ ಸುಬ್ರಹ್ಮಣ್ಯದ ಜನಸಾಮಾನ್ಯರಿಗೆ, ವರ್ತಕರಿಗೆ, ಅಂಗಡಿ ಮಾಲೀಕರಿಗೆ, ಸುಬ್ರಮಣ್ಯ ಗ್ರಾಮಸ್ಥರಿಗೆ ತೊಂದರೆ ಆಗದಂತೆ ನಿಮ್ಮ ಜೊತೆ ಚರ್ಚಿಸಿ ಸಮಸ್ಯೆಗಳಿಗೆ ಪರಿಹಾರ ಮಾರ್ಗಸೂಚಿ ಏನೂ ಮಾಡಬಹುದು ಎಂದು ತಿಳಿದುಕೊಂಡು ನಿರ್ಣಯವನ್ನು ತೆಗೆದುಕೊಳ್ಳುವ ಎಂದು ಈ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದೇವೆ ಎಂದು ನುಡಿದರು.

ಇದಾಗಲೇ ಮೇಲಾಧಿಕಾರಿ ಗಳು ಆದೇಶ ಮಾಡಿದ್ದಾರೆ, ಈ ಆದೇಶದಲ್ಲಿ ಚಿಕ್ಕಪುಟ್ಟ ಬದಲಾವಣೆ ಮಾಡಬಹುದು, ಈ ಹೊಸ ನಿಯಮ ಜಾರಿಗೆ ಬಂದ ಮೇಲೆ ಸ್ಥಳೀಯರಿಗೆ ಸ್ವಲ್ಪ ಕಷ್ಟ ಆಗಬಹುದು, ಎಲ್ಲರೂ ಜವಾಬ್ದಾರಿಯಿಂದ ನಮ್ಮ ಜೊತೆ ಸಹಕರಿಸಿದರೆ ಕುಕ್ಕೆ ಸುಬ್ರಹ್ಮಣ್ಯದ ಪಾರ್ಕಿಂಗ್ ಸಮಸ್ಯೆಯನ್ನು ಸರಿಪಡಿಸಬಹುದು, ಕುಕ್ಕೆ ಸುಬ್ರಹ್ಮಣ್ಯ ಇಡೀ ರಾಜ್ಯಕ್ಕೆ ಮಾದರಿ, ದ್ವಾರದ ಬಳಿಯಿಂದ ಕಾಶಿಕಟ್ಟೆ ವರೆಗೆ ಯಾವುದೇ ಸಮಸ್ಯೆಗಳಿಲ್ಲ, ಪೊಲೀಸರು, ಭದ್ರತಾ ಸಿಬ್ಬಂದಿಗಳು, ಎಷ್ಟು ಜನರನ್ನು ಹಾಕಿದ್ದರು ಸಮಸ್ಯೆ ತಪ್ಪಿದ್ದಲ್ಲ, ನಿಮ್ಮೆಲ್ಲರ ಸಲಹೆ ಹಾಗೂ ಸಹಕಾರ ಬೇಕು ಎಂದರು.
ಹೊಸ ರಸ್ತೆ ನಿಯಮ ಹಾಗೂ ಪಾರ್ಕಿಂಗ್ ವ್ಯವಸ್ಥೆಗಳ ಬಗ್ಗೆ ನಕ್ಷೆಯ ಚಿತ್ರವನ್ನ ಪ್ರದರ್ಶನ ಮಾಡುವುದರ ಮೂಲಕ ಯಾವ ರೀತಿ ರಸ್ತೆಯಲ್ಲಿ ಸಂಚರಿಸಬೇಕು, ಪಾರ್ಕಿಂಗ್ ವ್ಯವಸ್ಥೆಎಲ್ಲಿರುತ್ತದೆ, ಆಟೋರಿಕ್ಷಾ ನಿಲ್ದಾಣಗಳು, ಟೂರಿಸ್ಟ್ ಚಿಕ್ಕ ವಾಹನಗಳು,ಬಸ್ ಗಳು, ಎಲ್ಲಿ ಪಾರ್ಕಿಂಗ್ ಮಾಡಬೇಕು, ಸುಳ್ಯ ಹಾಗೂ ಬೆಂಗಳೂರು ಭಾಗದಿಂದ ಬರುವ ವಾಹನಗಳುಎಲ್ಲಿ ಪಾರ್ಕಿಂಗ್ ಮಾಡಬೇಕು ಎಲ್ಲ ವಿಚಾರಗಳ ಬಗ್ಗೆ ಜಿಲ್ಲಾಧಿಕಾರಿಗಳ ಆದೇಶದಂತೆ ಹೊಸ ರಸ್ತೆ ನಿಯಮ ಗಳನ್ನು ಸಭೆಯಲ್ಲಿ ವಿವರಿಸಿ ಎಲ್ಲರ ಜೊತೆ ಚರ್ಚಿಸಿ ನಿರ್ಣಯವನ್ನು ಕೆಲ ನಿರ್ಣಯ ಕೈಗೊಳ್ಳಲಾಯಿತು.
ಈ ಸಂದರ್ಭದಲ್ಲಿ ಕುಕ್ಕೆ ಸುಬ್ರಹ್ಮಣ್ಯದ ಗ್ರಾಮಸ್ಥರು, ವರ್ತಕರು ವಾಹನ ಚಾಲಕ ಮಾಲಕರು ಉಪಸ್ಥಿತರಿದ್ದು ಸಲಹೆ ನೀಡಿದರು.

ಸುಬ್ರಹ್ಮಣ್ಯ ಪಾರ್ಕಿಂಗ್ ವ್ಯವಸ್ಥೆ ಹೀಗಿರಲಿದೆ

ಕುಕ್ಕೆ ಸುಬ್ರಹ್ಮಣ್ಯ ಪೇಟೆಯಲ್ಲಿ ಕಾಶಿಕಟ್ಟೆಯಿಂದ ರಥಬೀದಿ ಮತ್ತು ಸವಾರಿ ಮಂಟಪದ ಮುಖ್ಯ ರಸ್ತೆ, ಕಾಶಿಕಟ್ಟೆ – ಸವಾರಿ ಮಂಟಪ ಬೈಪಾಸ್ ರಸ್ತೆ ಪೂರ್ಣ ನೋ ಪಾರ್ಕಿಂಗ್ ಝೋನ್ ಆಗಿ ಮಾಡುವ ನಿರ್ಧಾರ ಮಾಡಲಾಗಿದೆ.

ಆಂಜನೇಯ ದೇವಸ್ಥಾನ ಬಳಿಯ ಪಾರ್ಕಿಂಗ್ ಸ್ಥಳ, ಇಂಜಾಡಿಯ ಪಾರ್ಕಿಂಗ್ ಸ್ಥಳ ಹಾಗೂ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಎದುರು ಭಾಗದ ಸ್ಥಳದಲ್ಲಿ ಸಾರ್ವಜನಿಕರ ಮತ್ತು ಯಾತ್ರಾರ್ಥಿಗಳು ವಾಹನ ಪಾರ್ಕಿಂಗ್ ಮಡುವ ನಿರ್ಧಾರ ಮಾಡಲಾಗಿದೆ. ನಿಯೋ ಮೈಸೂರು ಕೆಫೆಯ ಎದುರು ಭಾಗದ ಪಾರ್ಕಿಂಗ್ ಸ್ಥಳ ಸ್ಥಳೀಯರಿಗೆ ಹಾಗೂ ಅಂಗಡಿಯವರಿಗೆ ವಾಹನ ಪಾರ್ಕಿಂಗ್ ಮಾಡಲು ಅವಕಾಶ ಒದಗಿಸುವುದು. ರಥಭೀದಿಯ ಪೊಲೀಸ್ ಸರ್ಕಲ್ ಬಳಿಯಲ್ಲಿ ಮುಖ್ಯ ರಸ್ತೆಯಲ್ಲಿ ಕೇವಲ ನಾಲ್ಕು ಅಟೋಗಳಿಗೆ ನಿಲ್ಲಲು ಅವಕಾಶ ನೀಡಿ ಉಳಿದ ಅಟೋಗಳು ಅಲ್ಲೆ ಹತ್ತಿರದ ಪಾರ್ಕಿಂಗ್ ಸ್ಥಳದೊಳಗೆ ನಿಲ್ಲುವ ವ್ಯವಸ್ಥೆ ಮಾಡುವುದು.

ಕಾಶಿಕಟ್ಟೆಯಿಂದ ಆದಿ ಸುಬ್ರಹ್ಮಣ್ಯ ರಸ್ತೆ ಹಾಗೂ ಕೆ.ಎಸ್. ಆರ್.ಟಿ ಸಿ ಬಳಿಯ ರಸ್ತೆಯನ್ನು ವನ್ ವೇ ಮಾಡುವುದು. ದೇವಸ್ಥಾನಕ್ಕೆ ಬರುವ ಭಕ್ತರು ಒಂದು ಕಡೆಯಿಂದ ಬಂದು ಇನ್ನೊಂದು ಕಡೆ ಹೋಗುವ ವ್ಯವಸ್ಥೆ ಜಾರಿಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಈ ನಿರ್ಣಯಗಳನ್ನು ಜಾರಿಗೊಳಿಸಲು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ವತಿಯಿಂದ ಭದ್ರತಾ ಸಿಬ್ಬಂದಿ ಸಹಿತ ಸಕಲ ಸಹಕಾರ ನೀಡುವಂತೆ ಕೇಳಿಕೊಳ್ಳಲಾಗಿದೆ. ಈಗಾಗಲೇ ನಿರ್ಣಯಿಸಿರುವ ನಿರ್ಣಯಗಳನ್ನು ಜಿಲ್ಲಾಧಿಕಾರಿಗಳಿಗೆ ಬರೆದು ಅನುಮತಿ ಪಡೆದು ಈ ನಿಯಮಗಳನ್ನು ಜಾರಿಗೊಳಿಸುವ ನಿರ್ಧಾರಕ್ಕೆ ಬರಲಾಗಿದೆ.