ಸರಕಾರಿ ಕಾರ್ಯಕ್ರದಲ್ಲಿ ಪ್ರತೀ ಬಾರಿಯೂ ಶಾಸಕರು ತಡವಾಗಿ ಭಾಗವಹಿಸುವುದು ಎಷ್ಟು ಸರಿ?

0

ನ.ಪಂ. ಸದಸ್ಯ ಎಂ.ವೆಂಕಪ್ಪ ಗೌಡ ಪ್ರಶ್ನೆ

ಪ್ರತೀ ಬಾರಿಯೂ ತಾಲೂಕಿನಲ್ಲಿ ಆಚರಿಸಲ್ಪಡುವ ಸರ್ಕಾರಿ ಕಾರ್ಯಕ್ರಮಗಳಲ್ಲಿ ತಡವಾಗಿ ಶಾಸಕರ ಭಾಗವಹಿಸುವಿಕೆ ಎಷ್ಟು ಸರಿ ? ಎಂದು ನ.ಪಂ. ಸದಸ್ಯ ಎಂ.ವೆಂಕಪ್ಪ ಗೌಡರು ಪ್ರಶ್ನಿಸಿದ್ದಾರೆ.

ಸುಳ್ಯದಲ್ಲಿ ನಡೆಯುತ್ತಿರುವ ಸರಕಾರಿ ಕಾರ್ಯಕ್ರಮಗಳಲ್ಲಿ ನಮ್ಮ ಶಾಸಕರು ಪ್ರತಿಬಾರಿಯೂ ತಡವಾಗಿ ಅಗಮಿಸಿ ,ಸೇರಿದ ಅತಿಥಿಗಳನ್ನು ,ಸಭಿಕರನ್ನು ಕಾಯುಸುವುದು ಸರ್ವೆ ಸಾಮಾನ್ಯ ವಾಗಿದೆ .ತಾಲೂಕಿನಲ್ಲಿ ನಡೆಯುತ್ತಿರುವ ಸ್ವಾತಂತ್ರ, ಪ್ರಜಾಪ್ರಭುತ್ವ ದಿನಾಚರಣೆಯಲ್ಲಿ ಭಾಗವಹಿಸಿದ್ದ ಪುಟ್ಟ ಪುಟ್ಟ ವಿದ್ಯಾರ್ಥಿಗಳನ್ನು ಉರಿಬಿಸಿಲಲ್ಲಿ ಗಂಟೆಗಟ್ಟಲೆ ಕಾಯುಸುವುದು , ಕೆಲವು ಕಾರ್ಯಕ್ರಮದಲ್ಲಿ ಉಸ್ತುವಾರಿ ಸಚಿವರು ಕಾರ್ಯಕ್ರಮಕ್ಕೆ ಸಮಯೋಚಿತವಾಗಿ ಭಾಗವಹಿಸಿದರು ಅರ್ಧ ಗಂಟೆ ಬಳಿಕ ಸಭೆಗೆ ಅಗಮಿಸಿ ನನ್ನನ್ನು ಕಾಯದೆ ಯಾಕೆ ಕಾರ್ಯಕ್ರಮ ಮಾಡಿದ್ದೀರಿ ಅಂತ ಶಾಸಕರು ಅಧಿಕಾರಿಗಳನ್ನು ಕೇಳುತ್ತಾರೆ .

ಅದೇ ಪ್ರಕಾರ ಇವತ್ತು ಕೂಡಾ ಕೆಂಪೇ ಗೌಡರ ಜಯಂತಿ ಕಾರ್ಯಕ್ರಮಲ್ಲಿ ಕೂಡಾ ಸುಮಾರು 25 ಮಿನಿಟ್ ತಡವಾಗಿ ಬರುತ್ತರೆ.ಅದರೂ ನಮ್ಮ ತಾಲೂಕಿನ ಅಧಿಕಾರಿಗಳು ಕಾಯುತ್ತಾರೆ .ಇದರಿಂದ ಸೇರಿದ ಸಭಿಕರು ತಮ್ಮ ತಮ್ಮ ಒಳಗೆ ಮಾತಾಡಿಕೊಂಡರು ಅಧಿಕಾರಿಗಳು ಮಾತ್ರ ನಮಗೆ ಏನು ಸಂಬಂಧ ಇಲ್ಲದ ಹಾಗೆ ವರ್ತಿಸುತ್ತಿರುದು ವಿಪಾರ್ಯಸವೇ ಸರಿ .ಇನ್ನಾದರು ಅಧಿಕಾರಿಗಳು ಈ ಬಗ್ಗೆ ಚಿಂತಿಸಿ ಕಾರ್ಯಕ್ರಮ ಸಮಯಕ್ಕೆ ಸರಿಯಾಗಿ ನಡೆಯುವಂತೆ ನೋಡಿಕೊಳ್ಳಬೇಕು ಎಂದು ವೆಂಕಪ್ಪ ಗೌಡರು ಆಗ್ರಹಿಸಿದ್ದಾರೆ.