ಇರುವಂಬಳ್ಳ ಕಾಲು ಸೇತುವೆ ಶಿಥಿಲ, ಅಧಿಕಾರಿಗಳು ಭೇಟಿ ಪರಿಶೀಲನೆ

0

ಗೋರಡ್ಕದಿಂದ ಇರುವಂಬಳ್ಳಕ್ಕೆ ಹಾದು ಹೋಗುವ ಕಾಲು ಸೇತುವೆ ಶಿಥಿಲಗೊಂಡು ಮುರಿದು ಬೀಳುವ ಸ್ಥಿತಿಯಲ್ಲಿದ್ದು ಸ್ಥಳೀಯರಲ್ಲಿ ಆತಂಕ ಮೂಡಿದೆ.


ಈ ಬಗ್ಗೆ ಸ್ಥಳೀಯರಾದ ಅಂದುಞಗೋರಡ್ಕ ಸುಳ್ಯ ಬ್ಲಾಕ್ ಕಾಂಗ್ರೆಸ್ ಸಾಮಾಜಿಕ ಜಾಲತಾಣ ಅಧ್ಯಕ್ಷ ಎ ಬಿ ಅಬ್ಬಾಸ್ ಅವರಿಗೆ ಮಾಹಿತಿ ನೀಡಿದ್ದು,ಇವರು ಅಜ್ಜಾವರ ಗ್ರಾಮ ಪಂಚಾಯತ್ ಮತ್ತು ಸುಳ್ಯ ತಹಶೀಲ್ದಾರರ ಗಮನಕ್ಕೆ ನೀಡಿದ್ದಾರೆ. ಮನವಿಗೆ ಸ್ಪಂದಿಸಿದ ತಹಶೀಲ್ದಾರ್ ಮಂಜುನಾಥ್ ರವರು ಜೂ. 28 ರಂದು ಸ್ಥಳಕ್ಕೆ ಸುಳ್ಯ ಕಂದಾಯ ನಿರೀಕ್ಷರಾದ ಅವಿನ್ ರಂಗತ್ತಮಲೆರವರನ್ನು ಕಳುಹಿಸಿ ಮಾಹಿತಿ ಸಂಗ್ರಹಿಸಿದ್ದಾರೆ.


ಈ ಸಂದರ್ಭದಲ್ಲಿ ಅಜ್ಜಾವರ ಗ್ರಾಮ ಲೆಕ್ಕಧಿಕಾರಿ ನಾರಾಯಣ,ಉಗ್ರಾಣಿ ಶಿವಣ್ಣ ಮಂಡೆಕೋಲು
ಅಜ್ಜಾವರ ಪಂಚಾಯತ್ ಸ್ಟಾಫ್ ಕಾರ್ತಿಕ್ ಮೊದಲಾದವರು ಉಪಸ್ಥಿತರಿದ್ದರು.