ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಷನ್ 55 ನೇ ವಾರ್ಷಿಕ ಮಹಾಸಭೆ

0

ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಷನ್ ಗಾಂಧಿನಗರ ಸುಳ್ಯ ಇದರ 55 ನೇ ವಾರ್ಷಿಕ ಮಹಾಸಭೆ ಜೂ.28 ರಂದು ಶುಕ್ರವಾರ ಮಗರಿಬ್ ನಮಾಜ್ ನಂತರ ಗಾಂಧಿನಗರ ಎಂ ಐ ಮದರಸ ಸಭಾಂಗಣದಲ್ಲಿ ನಡೆಯಿತು.

ಸಭೆಯನ್ನು ಸಯ್ಯದ್ ಕುಂಞಿಕೋಯ ತಂಙಳ್ ದುವಾಶಿರ್ವಚನ ಮೂಲಕ ಚಾಲನೆ ನೀಡಿದರು.


ಗಾಂಧಿನಗರ ಜುಮ್ಮಾ ಮಸೀದಿಯ ಮದರ್ರಿಸ್ ಇರ್ಪಾನ್ ಸಖಾಫಿ ಅಲ್ ಹಿಮಮಿ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿ ಬಡವರ ಸಂರಕ್ಷಣಾ ಕಾರ್ಯದಲ್ಲಿ ಅನ್ಸಾರ್ ಸೇವೆ ಮಹತ್ತರವಾದದ್ದು ಗಾಂಧಿನಗರ ಜಮಾಯತ್ ವ್ಯಾಪ್ತಿಯಲ್ಲಿ ಬಡ ಅನಾಥ ಹೆಣ್ಣುಮಕ್ಕಳ ವಿವಾಹ,ವಿದ್ಯಾಭ್ಯಾಸಕ್ಕೆ ಸಹಾಯ ಇನ್ನಿತರ ಸಮಾಜಮುಖಿ ಕೆಲಸಗಳನ್ನು ಮಾಡುತ್ತ ಬಂದಿರುವ ಸಂಸ್ಥೆ ಅನ್ಸಾರ್ ಇದರ ಸೇವೆ ಶ್ಲಾಘನೀಯ ವಾದದ್ದು ಎಂದವರು ಹೇಳಿದರು.

ಅನ್ಸಾರ್ ಅಧ್ಯಕ್ಷ ಹಾಜಿ ಕೆ ಹೆಚ್ ಅಬ್ದುಲ್‌ ಶುಕೂರ್ ಅಧ್ಯಕ್ಷತೆ ವಹಿಸಿದ್ದರು.

ಗಾಂಧಿನಗರ ಜಮಾಯತ್ ಕಮಿಟಿ ಅಧ್ಯಕ್ಷ ಹಾಜಿ ಮಹಮ್ಮದ್ ಕೆಎಂಎಸ್,ಉಪಾಧ್ಯಕ್ಷ ಹಮೀದ್ ಬೀಜಕೊಚ್ವಿ, ಅನ್ಸಾರಿಯ ಅಧ್ಯಕ್ಷ ಹಾಜಿ ಕೆ ಎಂ ಅಬ್ದುಲ್‌ ಮಜೀದ್,ಸಲಹಾ ಸಮಿತಿ ಸದಸ್ಯ ಹಾಜಿ ಐ ಇಸ್ಮಾಯಿಲ್, ಹಾಜಿ ಕೆ.ಬಿ ಮಹಮ್ಮದ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.


ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಷನ್ ಉಪಾಧ್ಯಕ್ಷ ಹಾಜಿ ಎಸ್ ಅಬ್ದುಲಾ,ಜುನೈದ್ ಎನ್.ಎ,ಕಾರ್ಯದರ್ಶಿ ಬಶೀರ್ ಜಿ.ಎ, ಕೋಶಾಧಿಕಾರಿ ಹಾಜಿ ಅಬ್ದುಲ್‌ ಹಮೀದ್ ಜನತಾ,ನಿರ್ದೇಶಕರುಗಳಾದ ಆದಂ ಹಾಜಿ ಕಮ್ಮಾಡಿ,ಅಬ್ದುಲ್‌ ಖಾದರ್ ಹಾಜಿ ಪಾರೆ,ಹಾಜಿ ಅಬ್ದುಲ್ ಗಫಾರ್,ಹಾಜಿ ಅಬ್ದುಲ್ ಖಾದರ್ ಸಿ.ಎ,ಹಾಜಿ ಯಾಕುಬ್ ಎಸ್ ಟಿ,ಹಾಜಿ ಅಬ್ದುಲ್ ಹಮೀದ್ ಎಸ್ ಎಂ,ಕೆ.ಬಿ ಇಬ್ರಾಹಿಂ, ಲತೀಫ್ ಹರ್ಲಡ್ಕ, ಅಬ್ದುಲ್ ಲತೀಫ್ ಎಂ ಕೆ,ಎಸ್ ಪಿ ಅಬೂಭಕ್ಕರ್,ಶಾಫಿ ಕುತ್ತಮೊಟ್ಟೆ, ಅಬ್ದುಲ್ ರಝಾಕ್ ಕರಾವಳಿ, ಸಿದ್ದೀಕ್ ಕಟ್ಟೆಕ್ಕಾರ್, ಶಾಹಿದ್ ಪಾರೆ,ಸಿದ್ದೀಕ್ ಬಿ.ಎ,ಹಮೀದ್ ಚಾಯ್ಸ್, ನೌಶಾದ್ ಕೆರೆಮೂಲೆ ಉಪಸ್ಥಿತರಿದ್ದರು.


ನೂತನ ಕಾರ್ಯಕಾರಿ ಸಮಿತಿಯ ನಿರ್ದೇಶಕರಾಗಿಹಾಜಿ ಎಸ್ ಅಬ್ದುಲಾ,ಹಾಜಿ ಅಬ್ದುಲ್ ಶುಕೂರ್, ಕಟ್ಟೆಕ್ಕಾರ್ ,ಜುನೈದ್ ಎನ್.ಎ,,ಹಾಜಿ ಅಬ್ದುಲ್‌ ಹಮೀದ್ ಜನತಾ,ಆದಂ ಹಾಜಿ ಕಮ್ಮಾಡಿ,ಹಾಜಿ ಅಬ್ದುಲ್ ಗಫಾರ್,ಹಾಜಿ ಅಬ್ದುಲ್ ಖಾದರ್ ಸಿ.ಎ,ಹಾಜಿ ಯಾಕುಬ್ ಎಸ್ ಟಿ,ಲತೀಫ್ ಹರ್ಲಡ್ಕ,,ಎಸ್ ಪಿ ಅಬೂಭಕ್ಕರ್,ಶಾಫಿ ಕುತ್ತಮೊಟ್ಟೆ, ಅಬ್ದುಲ್ ರಝಾಕ್ ಕರಾವಳಿ, , ಶಾಹಿದ್ ಪಾರೆ,ಹನೀಫ್ ಬಿ.ಎಂ,ಹನೀಫ್ ಬುಶ್ರಾ,ಸಂಶುದ್ದೀನ್ ಕೆ ಎಂ,ಅಬೂಭಕ್ಕರ್ ಕೆ.ಎ ಹಾಜಿ ಮುಸ್ತಫಾ ಕೆ.ಎಂ ಜನತಾ,ಇಬ್ರಾಹಿಂ ಕೆ ಬಿ,ಶರೀಫ್ ಜಟ್ಟಿಪಳ್ಳ ರವರನ್ನು ಆಯ್ಕೆಮಾಡಲಾಯಿತು.