ಸಾರ್ವಜನಿಕ ಶ್ರೀ ಶಾರದಾಂಬ ಸೇವಾ ಸಮಿತಿ(ರಿ) ಸುಳ್ಯ ಇದರ ಪದಾಧಿಕಾರಿಗಳ ಆಯ್ಕೆ

0

ಸಾರ್ವಜನಿಕ ಶ್ರೀ ಶಾರದಾಂಬ ಸೇವಾ ಸಮಿತಿ(ರಿ) ಸುಳ್ಯ ಇದರ ಸಭೆಯು ಗೌರವಾಧ್ಯಕ್ಷ ಗೋಕುಲ್ ದಾಸ್ ರವರ ಅಧ್ಯಕ್ಷತೆಯಲ್ಲಿ ಸುಳ್ಯದ ಕಾನತ್ತಿಲ ದೇವಮ್ಮ ಕಾಂಪ್ಲೆಕ್ಸ್ ನಲ್ಲಿ ನಡೆಯಿತು.

ಸಭೆಯಲ್ಲಿ ನೂತನ ಅಧ್ಯಕ್ಷರಾಗಿ ನಾರಾಯಣ ಕೇಕಡ್ಕ , ಪ್ರಧಾನಕಾರ್ಯದರ್ಶಿಯಾಗಿ ರಾಜು ಪಂಡಿತ್ , ಕೋಶಾಧಿಕಾರಿಯಾಗಿ ಅಶೋಕ್ ಪ್ರಭು ಆಯ್ಕೆಯಾದರು. ಶ್ರೀ ಶಾರದಾಂಬ ದಸರಾ ಸೇವಾ ಟ್ರಸ್ಟ್ ಇದರ ಅಧ್ಯಕ್ಷರಾಗಿ ನವೀನ್‌ಚಂದ್ರ ಕೆ ಎಸ್ ಬೆಂಗಳೂರು, ಪ್ರಧಾನ ಕಾರ್ಯದರ್ಶಿ ಸತೀಶ್ ಎಮ್ ಕೆ, ಕೋಶಾಧಿಕಾರಿ ಬೂಡು ರಾಧಾಕೃಷ್ಣ ರೈ ಆಯ್ಕೆಯಾದರು.

ಉಳಿದ ಪದಾಧಿಕಾರಿಗಳನ್ನು ಮುಂದಿನ ದಿನಗಳಲ್ಲಿ ಆಯ್ಕೆ ಮಾಡುವುದೆಂದು ತೀರ್ಮಾನಿಸಲಾಯಿತು. ಸಭೆಯನ್ನು ಉದ್ದೇಶಿಸಿ ಶ್ರೀ ಶಾರದಾಂಬ ಸೇವಾ ಟ್ರಸ್ಟ್ ನ ಅಧ್ಯಕ್ಷ ನವೀನ್ ಬೆಂಗಳೂರು , ನೂತನವಾಗಿ ಆಯ್ಕೆಯಾದ ಅಶೋಕ್ ಪ್ರಭು ಮಾತನಾಡಿದರು.

ಮುಂದಿನ ಕಾರ್ಯಕ್ರಮದ ಬಗ್ಗೆ ನೂತನವಾಗಿ ಆಯ್ಕೆಯಾದ ನಾರಾಯಣ ಕೇಕಡ್ಕರವರು ಸವಿಸ್ಥಾರವಾಗಿ ವಿವರಿಸಿದರು. ಗೌರವಾಧ್ಯಕ್ಷ ಗೋಕುಲ್ ದಾಸ್ ರವರು ಪ್ರಾಸ್ತವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಸುನಿಲ್ ಕೇರ್ಪಳ ಉಪಸ್ಥಿತರಿದ್ದರು. ರಾಧಾಕೃಷ್ಣ ರೈ ಬೂಡು ವಂದನಾರ್ಪಣೆಗೈದರು.