ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವ ಸಂಪನ್ನ

0

ಅಗ್ನಿಗುಳಿಗ ದೈವದ ಭೂತಕೋಲ,ಬಟ್ಟಲು ಕಾಣಿಕೆ

ಇತಿಹಾಸ ಪ್ರಸಿದ್ಧ ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವವು ಫೆ.12 ರಿಂದ ಪ್ರಾರಂಭಗೊಂಡು ಫೆ.16 ರಂದು ಸಂಪನ್ನಗೊಂಡಿತು.


ಫೆ.16 ರಂದು ಬೆಳಿಗ್ಗೆ ಕವಾಟೋದ್ಘಾಟನೆ,ತೈಲಾಭ್ಯಂಜನ,ಉಷಾ:ಪೂಜೆ,ಆರಾಟು ಬಲಿ,ಅವಭೃತ ಸ್ನಾನ,ಶ್ರೀ ದೇವರ ದರ್ಶನ ಬಲಿ ಬಳಿಕ ರಾಜಾಂಗಣ ಪ್ರಸಾದ,ಬಟ್ಟಲು ಕಾಣಿಕೆ ಭಕ್ತಿ ,ಸಂಭ್ರಮದಿಂದ ನಡೆಯಿತು.
ನಂತರ ಧ್ವಜ ಅವರೋಹಣದೊಂದಿಗೆ ಜಾತ್ರೋತ್ಸವ ಸಂಪನ್ನಗೊಂಡಿತು.


ನಂತರ ಮಹಾಪೂಜೆ,ಮಂತ್ರಾಕ್ಷತೆ ನಡೆದ ಬಳಿಕ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು.
ರಾತ್ರಿ ಅಗ್ನಿಗುಳಿಗ ದೈವದ ಭಂಡಾರ ತೆಗೆಯಲಾಯಿತು.


ನಂತರ ಭೂತಕೋಲ ಬಟ್ಟಲು ಕಾಣಿಕೆ ನಡೆಯಿತು.
ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುರೇಶ್ ಕುಮಾರ್ ಶೆಟ್ಟಿ ಪನ್ನೆಗುತ್ತು,ಸದಸದಯರಾದ ಅರ್ಚಕ ಉದಯಕುಮಾರ ಕೆ.ಟಿ, ವಿಶ್ವನಾಥ ಭಟ್ ಕುರುಂಬುಡೇಲು,ಗಂಗಾಧರ ರೈ ಪುಡ್ಕಜೆ,ಉದಯಪ್ರಸಾದ್ ಅಜಪಿಲ,ಶಮಿತಾ ಪಿ.ರೈ,ನವಪ್ರಭಾ ತಂಬಿನಮಕ್ಕಿ,ರಾಧಾಕೃಷ್ಣ ಕುಲಾಲ್,ಚಂದ್ರಕಾಂತ ಗೌರಿಹೊಳೆ ಹಾಗೂ ಸಾವಿರಾರು ಜನ ಭಕ್ತಾದಿಗಳು ಉಪಸ್ಥಿತರಿದ್ದರು.