








ಪೆರುವಾಜೆ ಗ್ರಾಮದ ಮುಕ್ಕೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಕರ್ನಾಟಕ ಗ್ರಾಮೀಣ ವಿಕಾಸ ಬ್ಯಾಂಕ್ನ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ಯೋಜನೆಯಲ್ಲಿ 2 ಕಂಪ್ಯೂಟರ್ಗಳನ್ನು ಬ್ಯಾಂಕ್ನ ಧಾರವಾಡ ಪ್ರಧಾನ ಕಚೇರಿಯ ಸೀನಿಯರ್ ಮ್ಯಾನೇಜರ್ ನವೀನ್ ರೆಡ್ಡಿ ಕೊಡುಗೆಯಾಗಿ ನೀಡಿದರು. ಬ್ಯಾಂಕ್ನ ಬೆಳ್ಳಾರೆ ಶಾಖೆಯ ಮ್ಯಾನೇಜರ್ ನವೀನ್, ಶಾಲಾ ಮುಖ್ಯಗುರು ಲತಾ, ಎಸ್ಡಿಎಂಸಿ ಅಧ್ಯಕ್ಷ ಜಯಂತ್ ಕುಂಡಡ್ಕ, ಹೊನ್ನಪ್ಪ ಗೌಡ ಚಾಮುಂಡಿಮೂಲೆ, ಪ್ರಸಾದ್ ಕುಂಡಡ್ಕ, ಕಿರಣ್ ಚಾಮುಂಡಿಮೂಲೆ ಮತ್ತು ಎಸ್ಡಿಎಂಸಿ ಸದಸ್ಯರು,ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.










