ಅರಂತೋಡು ಗ್ರಾಮದ ಬಾಜಿನಡ್ಕ ಶ್ರೀ ಆದಿನಾಗಬ್ರಹ್ಮ ಮೊಗೇರ್ಕಳ ದೈವಸ್ಥಾನ ಹಾಗೂ ಶ್ರೀ ಆದಿನಾಗಬ್ರಹ್ಮ ಮೊಗೇರ್ಕಳ ದೈವಸ್ಥಾನ ಟ್ರಸ್ಟ್
ವತಿಯಿಂದ 3 ವರ್ಷಕ್ಕೊಮ್ಮೆ ನಡೆಯುವ 40 ನೇ ವರ್ಷದ ಶ್ರೀ ಆದಿನಾಗಬ್ರಹ್ಮ ಮೊಗೇರ್ಕಳ ದೈವಗಳ ನೇಮೋತ್ಸವವು
ಮಾರ್ಚ್ 8 ಮತ್ತು ಮಾರ್ಚ್ 9 ರಂದು ನಡೆಯಲಿರುವುದು.









ಮಾರ್ಚ್ 8 ರಂದು ಶ್ರೀ ಅಂಬರೀಷ್ ಭಟ್ ಅವರ ಪೌರೋಹಿತ್ಯದಲ್ಲಿ ಬೆಳಿಗ್ಗೆ 7.00 ಕ್ಕೆ ಗಣಪತಿ ಹವನ, ಅಪರಾಹ್ನ 3.00 ಕ್ಕೆ ಮಂತ್ರವಾದಿ ಗುಳಿಗ ದೈವದ ಕೋಲ, ಅಪರಾಹ್ನ 6.00 ಕ್ಕೆ ಮೊಗೇರ ದೈವಗಳ ಭಂಡಾರ ತೆಗೆಯುವುದು.
ಸಂಜೆ 6.30 ರಿಂದ ಸಭಾ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮವನ್ನು ಶಾಸಕರಾದ ಕು.ಭಾಗೀರಥಿ ಮುರುಳ್ಯ ಉದ್ಘಟಿಸಲಿರುವರು. ಶ್ರೀ ಅನ್ನಪೂರ್ಣೇಶ್ವರಿ ಕ್ಷೇತ್ರ ಯೋಗೀಶ್ವರ ಸಿದ್ಧಮಠ ಮರ್ಕಂಜ ಇಲ್ಲಿನ ಶ್ರೀ ಶ್ರೀ ರಾಜೇಶ್ ನಾಥ್ ಜೀ ಆಶೀರ್ವಚನ ಮಾಡಲಿದ್ದಾರೆ. ಅರಂತೋಡು ಗ್ರಾ.ಪಂ ಅಧ್ಯಕ್ಷ ಕೇಶವ ಅಡ್ತಲೆ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಹಲವಾರು ಗಣ್ಯರು ಭಾಗವಹಿಸಲಿದ್ದಾರೆ.
ರಾತ್ರಿ 9.00 ಕ್ಕೆ ಸಾರ್ವಜನಿಕ ಅನ್ನಸಂತರ್ಪಣೆ,
ನಂತರ ರಾತ್ರಿ 10.00 ಕ್ಕೆ ಮೊಗೇರ ದೈವಗಳ ಗರಡಿ ಇಳಿಯುವುದು.
ರಾತ್ರಿ 12.00 ಕ್ಕೆ ತನ್ನಿಮಾನಿಗ ದೈವದ ಗರಡಿ ಇಳಿಯುವುದು.
ಮಾರ್ಚ್ 9 ರಂದು ಮುಂಜಾನೆ ಗಂಟೆ 3.00 ಕ್ಕೆ ಪೂಜಾರಿಗಳ ದರ್ಶನ ಹಾಗೂ ಮೊಗೇರರ ಗಡಿ ಒಪ್ಪಿಸುವಿಕೆ, ಬೆಳಿಗ್ಗೆ 5.00 ಕ್ಕೆ ಹರಕೆ ಹಾಗೂ ಪ್ರಸಾದ ವಿತರಣೆ, ಪೂರ್ವಾಹ್ನ ಗಂಟೆ 8.30 ರಿಂದ ಸಾರ್ಲಪಟ್ಟದ ಸ್ವಾಮಿ ಕೊರಗಜ್ಜ ದೈವದ ನೇಮೋತ್ಸವ ನಡೆದು
ಮದ್ಯಾಹ್ನ 12.30 ರಿಂದ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.










