








ಉಬರಡ್ಕ ಮಿತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯರಾಗಿದ್ದು, ಮೇ.26 ರಂದು ನಿಧನರಾದ ನಾರಾಯಣ ಕಲ್ಚಾರು ಇವರ ಮರಣ ಸಾಂತ್ವನ ನಿಧಿ ರೂ.10000/- ವನ್ನು ಪುತ್ರರಾದ ಹರಿಪ್ರಸಾದ್, ಪತ್ನಿ ಶ್ರೀಮತಿ ಶಾಂತ ರವರಿಗೆ ಮೇ.28 ರಂದು ಸಂಘದ ಅಧ್ಯಕ್ಷ ದಾಮೋದರ ಗೌಡ ಮದುವೆಗದ್ದೆಯವರು ವಿತರಿಸಿ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರುಗಳಾದ ಸುರೇಶ್ ಎಂ.ಎಚ್, ಪಿ.ಎಸ್ ಗಂಗಾಧರ, ಜಗದೀಶ್ ಕಕ್ಕೆಬೆಟ್ಟು, ಈಶ್ವರ ಆರ್. ಕಲ್ಚಾರು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯಪ್ರಕಾಶ್ ಉರುಂಡೆ, ಉಪಸ್ಥಿತರಿದ್ದರು.










