ಗೂನಡ್ಕ ಬಳಿ ಚಾಲಕನ ನಿಯಂತ್ರಣ ತಪ್ಪಿ ಮನೆಯ ಕಾಂಪೌಂಡ್ ಗೆ ಗುದ್ದಿದ ಕಾರು – ಅಪಾಯದಿಂದ ಪಾರು

0

ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ರಸ್ತೆ ಬದಿಯ ಮನೆಯ ಕಾಂಪೌಂಡ್ ಗುದ್ದಿದ ಘಟನೆ ಗೂನಡ್ಕ ಬಳಿ
ಜುಲೈ 16 ರಂದು ಸಂಭವಿಸಿದೆ.

ಬೆಂಗಳೂರಿನಿಂದ ಸಂಪಾಜೆ ಮಾರ್ಗವಾಗಿ ಸುಳ್ಯಕ್ಕೆ ಬರುತ್ತಿದ್ದ KL 7 CR 2340 ಕೇರಳದ ಮೂಲದ ವಾಹನ ಗೂನಡ್ಕ ದ ಶಿರಾಡಿ ಬೈಲೆ ದೈವಸ್ಥಾನಕ್ಕೆ ಹೋಗುವ ದ್ವಾರದ ಬಳಿಯ ತಿರುವಿನಲ್ಲಿ ತಲುಪಿದಾಗ ಒಮ್ಮಿಂದೊಮ್ಮೆಲೆ ಚಾಲಕನ ನಿಯಂತ್ರಣ ತಪ್ಪಿ ರಹೀಂ ಬೀಜದ ಕಟ್ಟೆ ಅವರ ಮನೆಯ ಕಾಪೌಂಟ್ ಗೆ ಗುದ್ದಿ ನಿಂತಿತು. ಪರಿಣಾಮವಾಗಿ ಕಾಂಪೌಂಡ್ ಗೆ ಹಾನಿಯಾಗಿದ್ದು ಕಾರಿನ ಮುಂಭಾಗ ಜಖಂಗೊಂಡಿ ದೆ. ಅದೃಷ್ಟವಶಾತ್
ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ಕಾರಿನವನರು ಮೂಲತಃ ಕೇರಳದ ಕಾಸರಗೋಡಿನವರು ಎಂದು ತಿಳಿದುಬಂದಿದೆ.