ನಾಳೆ (ಆ.27): ಪಂಜ ದೇಗುಲದಲ್ಲಿ :ಅಪ್ಪಕಜ್ಜಾಯ ಮತ್ತು ಕದಿರು ವಿತರಣೆ ,ನವಾನ್ನ ಭೋಜನ

0

⬆️ ಮಕ್ಕಳಿಗೆ ವಿದ್ಯಾರಂಭ ,ಅನ್ನ ಪ್ರಾಶನ

ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಶ್ರೀ ಗಣೇಶ ಚತುರ್ಥಿಯ ಪ್ರಯುಕ್ತ ಆ.27 ರಂದು ಶ್ರೀ ದೇಗುಲದ ಕದಿರು ಗದ್ದೆಯಿಂದ ಕದಿರು ದೇಗುಲಕ್ಕೆ ತಂದು ಸಾನಿಧ್ಯಗಳಲ್ಲಿ ಹೊಸ್ತಾರೋಹಣ ಮಾಡುವ ಕಾರ್ಯಕ್ರಮ ನಡೆಯಲಿದೆ.
ಭಕ್ತಾದಿಗಳಿಗೆ ಪೂರ್ವಾಹ್ನ ಮಹಾಪೂಜೆಯ ನಂತರ ತೀರ್ಥ ಪ್ರಸಾದ, ಸೇವಾ ಪ್ರಸಾದ, ಅಪ್ಪಕಜ್ಜಾಯ ಮತ್ತು ಕದಿರು ವಿತರಣೆ ನಡೆಯಲಿರುವುದು. ಪೂ.9 ಗಂಟೆಯ ನಂತರ ಶ್ರೀ ಮಹಾಗಣಪತಿ ಹವನ ಮತ್ತು ಶ್ರೀ ದೇವರಿಗೆ ನವಾನ್ನ ಮಹಾ ನೈವೇದ್ಯ ಸಮರ್ಪಣೆ , ಮಹಾಪೂಜೆ ನಡೆಯಲಿರುವುದು.
ಮಕ್ಕಳಿಗೆ ವಿದ್ಯಾರಂಭ ಪೂ. 10 ರಿಂದ 11ರ ವರೆಗೆ , 12.30 ರಿಂದ 1.30 ರ ತನಕ . ಮಧ್ಯಾಹ್ನ ಮಹಾಪೂಜೆ ಬಳಿಕ ಮಕ್ಕಳಿಗೆ ಅನ್ನಪ್ರಾಶನ , ನವಾನ್ನ ಭೋಜನ ನಡೆಯಲಿದೆ. ಎಂದು ದೇಗುಲದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.