ದಕ್ಷಿಣ ಜಿಲ್ಲಾ ವಕ್ಫ್ ಅಧಿಕಾರಿಗಳು ನವಂಬರ್ 11ರಂದು ಗಾಂಧಿನಗರ ಜುಮಾ ಮಸೀದಿಗೆ ಭೇಟಿ ನೀಡಿದ್ದರು. ನಿಯೋಗದಲ್ಲಿ ದಕ್ಷಿಣ ಕನ್ನಡ ವಖ್ಫ್ ಅಧಿಕಾರಿಯಾದ ಅಬೂಬಕ್ಕರ್, ವಕ್ಫ್ ಆಡಿಟರ್ ಅನ್ವರ್ ಮುಸ್ತಫ ಬೈರಿಕಟ್ಟೆ,ಕಾಮಗಾರಿ ತಾಂತ್ರಿಕ ಪರಿಶೀಲನೆ ಇಂಜಿನಿಯರ್ ಅಬ್ದುಲ್ ಲತೀಫ್ ರವರು ಉಪಸ್ಥಿತರಿದ್ದರು.















ಈ ಸಂದರ್ಭದಲ್ಲಿ ಮಸೀದಿ ಪರಿಸರವನ್ನು ಸಂದರ್ಶನ ಮಾಡಿದ ಅಧಿಕಾರಿಗಳು ಸ್ಥಳೀಯ ಖಬರ್ ಸ್ಥಾನ ಆವರಣ ನಿರ್ಮಿಸಲು ವಕ್ಫ್ ನಿಂದ ಅನುದಾನ ಬಿಡುಗಡೆಯಾಗಿ ಕಾಮಗಾರಿ ಪೂರ್ಣ ಗೊಂಡ ಬಗ್ಗೆ ಪರಿಶೀಲನೆ ನಡೆಸಿ ಮೆಚ್ಚುಗೆ ವ್ಯಕ್ತ ಪಡಿಸಿದರು.
ಎಂಜೆಎಂ ಆಡಳಿತ ಮಂಡಳಿ ಅಧ್ಯಕ್ಷ ಹಾಜಿ ಮಹಮ್ಮದ್ ಕೆಎಂಎಸ್ ಅಧಿಕಾರಿಗಳಿಗೆ ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಿದರು
ಈ ಸಂದರ್ಭದಲ್ಲಿ ಎಂಜೆಎಂ ಉಪಾಧ್ಯಕ್ಷ ಅಬ್ದುಲ್ ಹಮೀದ್ ಬೀಜ ಕೊಚ್ಚಿ, ಕಾರ್ಯದರ್ಶಿ ಹಾಜಿ ಐ ಇಸ್ಮಾಯಿಲ್, ನಿರ್ದೇಶಕರು ಗಳಾದ ಸೂಡ ಅಧ್ಯಕ್ಷ ಕೆ. ಎಂ. ಮುಸ್ತಫ, ಕೆ. ಎಸ್ ಉಮ್ಮರ್, ಹಾಜಿ ಕೆ. ಎಂ. ಮುಹಿಯ್ಯದ್ದಿನ್ ಫ್ಯಾನ್ಸಿ, ಯಾಕೂಬ್ ಎಸ್ ಟಿ ಮೊದಲಾದವರು ಉಪಸ್ಥಿತರಿದ್ದರು.










