ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಆಟೋ ಚಾಲಕ ಮಾಲಕರ ಸಂಘದ ವತಿಯಿಂದ ಸೇತುವೆ ಶುಚಿತ್ವ

0

ಸುಳ್ಯ ರಸ್ತೆಯ ಕನ್ನಡಿ ಹೊಳೆ ಸೇತುವೆಯ ಮಳೆ ನೀರು ಸರಾಗವಾಗಿ ಹೋಗಲು ಸೇತುವೆಯ ಇಕ್ಕೆಲ್ಲ ಗಳಲ್ಲಿ ತುಂಬಿದ ಹೂಳು ಮಣ್ಣನ್ನು ಸುಬ್ರಹ್ಮಣ್ಯದ ಕುಕ್ಕೆ ಶ್ರೀ ಆಟೋ ಚಾಲಕ ಮಾಲಕರ ಸಂಘದ ವತಿಯಿಂದ ಜೂ.14 ರಂದು ಶುಚಿತ್ವ ಗೊಳಿಸಲಾಯಿತು.

ಮಳೆಗೆ ನೀರು ನಿಂತು ರಸ್ತೆಯಲ್ಲಿ ಹೋಗುತಿದ್ದ ಭಕ್ತಾದಿಗಳಿಗೆ ವಾಹನ ಚಲಾಯಿಸುವ ಸಂದರ್ಭದಲ್ಲಿ ಭಕ್ತಾದಿಗಳ ಮೇಲೆ ಕೆಸರು ನೀರು ಚೆಲ್ಲುತ್ತಿತ್ತು. ಇದನ್ನು ಮನಗಂಡ ಆಟೋ ಚಾಲಕ ಮಾಲಕರೆಲ್ಲಾ ಸೇರಿ ಶ್ರಮದಾನದ ಮೂಲಕ ಶುಚಿಗೊಳಿಸಿದರು. ಸೇತುವೆ ನೀರು ನಿಲ್ಲದಂತೆ ಕಣಿ ಮಾಡಿ ಕೊಡಲಾಯಿತು.