ಬೊಳುಬೈಲು : ರಬ್ಬರ್ ಗೋದಾಮಿಗೆ ಬೆಂಕಿ

0

ಲಕ್ಷಾಂತರ ರೂಪಾಯಿಗಳ ನಷ್ಟ

ಸುಳ್ಯದ ಬೊಳುಬೈಲು ಸಮೀಪ ರಬ್ಬರ್ ಗೋದಾಮಿಗೆ ಆಕಸ್ಮಿಕ ಬೆಂಕಿ ತಗುಲಿ ಲಕ್ಷಾಂತರ ರೂಪಾಯಿಗಳ ರಬ್ಬರ್ ಬೆಂಕಿಗೆ ಆಹುತಿಯಾದ ಘಟನೆ ನಡೆದಿದೆ.

ಇಂದು ಸಂಜೆ ಸುಮಾರು ನಾಲ್ಕು ಗಂಟೆಗೆ ಈ ಘಟನೆ ಸಂಭವಿಸಿದ್ದು ಅಗ್ನಿ ಅವಘಡದಿಂದ ಸಂಪೂರ್ಣ ಗೋದಾಮು ಬೆಂಕಿಗಾಹುತಿಯಾಗಿದೆ.


ಸುಳ್ಯದ ಕರ್ನಾಟಕ ರಬ್ಬರ್ ಮರ್ಚೆಂಟ್ ನ ಶಾಫಿ ಬೊಳು ಬೈಲು ರವರಿಗೆ ಸೇರಿದ ಗೋದಾಮು ಇದಾಗಿದ್ದು ವಿದ್ಯುತ್ ಸ್ಪಾರ್ಕ್ ನಿಂದ ಈ ಅನಾಹುತ ಸಂಭವಿಸಿದೆ ಎನ್ನಲಾಗಿದೆ.


ಸ್ಥಳೀಯರ ಆಕ್ರೋಶ

ಘಟನೆ ವಿಚಾರ ತಿಳಿದು ಬಂದ ಅಗ್ನಿಶಾಮಕ ದಳದವರ ವಾಹನದ ಟ್ಯಾಂಕ್ ನಲ್ಲಿ ನೀರು ಖಾಲಿಯಾಗಿದ್ದು ಇದರಿಂದಾಗಿಯೇ ಇಷ್ಟೊಂದು ನಷ್ಟಕ್ಕೆ ಕಾರಣವಾಯಿತು ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.