ಅರಂತೋಡು ಗ್ರಾಮಕ್ಕೆ ಖಾಯಂ ಗ್ರಾಮಕರಣಿಕರ ನೇಮಕಕ್ಕೆ ಮನವಿ

0

ಅರಂತೋಡು ಗ್ರಾಮದಲ್ಲಿ ಹಲವಾರು ವರ್ಷಗಳಿಂದ ಖಾಯಂ ಗ್ರಾಮಕರಣಿಕರು ಇಲ್ಲದೆ ಸಾರ್ವಜನಿಕರಿಗೆ, ರೈತರಿಗೆ ಹಾಗೂ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಸಂಪಾಜೆ ಗ್ರಾಮದ ಗ್ರಾಮಕರಣಿಕರು ವಾರದಲ್ಲಿ 2 ದಿನ ಮಾತ್ರ ಸೇವೆಗೆ ಲಭ್ಯವಿರುವುದರಿಂದ ಮತ್ತು ಅರಂತೋಡು ತೊಡಿಕಾನ ಗ್ರಾಮವು ಅತೀ ಗ್ರಾಮೀಣ ಪ್ರದೇಶವಾಗಿರುವುದರಿಂದ ಕೂಡಲೆ ಅರಂತೋಡು ಗ್ರಾಮಕ್ಕೆ ಖಾಯಂ ಗ್ರಾಮಕರಣಿಕರನ್ನು ನೇಮಿಸಬೇಕೆಂದು ಅರಂತೋಡು ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಅಶ್ರಫ್ ಗುಂಡಿರವರು ಕಂದಾಯ ಸಚಿವ ಕೃಷ್ಣಬೈರೇಗೌಡರವರಿಗೆ ಮನವಿ ಸಲ್ಲಿಸಿದ್ದಾರೆ.