ನಾಗಪಟ್ಟಣ ಶಾಲೆ ವಿದ್ಯಾರ್ಥಿನಿ ನವೋದಯ ಪರೀಕ್ಷೆಯಲ್ಲಿ ತೇರ್ಗಡೆ

0

ಎಪ್ರಿಲ್ ತಿಂಗಳಲ್ಲಿ ನಡೆದ ನವೋದಯ 6 ನೇ ತರಗತಿಯ ಪ್ರವೇಶ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ನಾಗಪಟ್ಟಣದ ವಿದ್ಯಾರ್ಥಿನಿ ಕು. ಲೋಚನ. ಎ ತೇರ್ಗಡೆಯಾಗಿ ಜವಾಹರ್ ನವೋದಯ ವಿದ್ಯಾಲಯಕ್ಕೆ ಆಯ್ಕೆಯಾಗಿರುತ್ತಾರೆ.
ಇವರು ಸುಳ್ಯ ನಾಗಪಟ್ಟಣ ನಿವಾಸಿ ಅರಸುರತ್ನಂ ಹಾಗೂ ಪ್ರಿಯದರ್ಶಿನಿ ದಂಪತಿಯ ಪುತ್ರಿ. ಇವರು ಪ್ರತಿಭಾ ವಿದ್ಯಾಲಯದಲ್ಲಿ ತರಬೇತಿ ಪಡೆದಿರುತ್ತಾರೆ.
ಇವರ ಸಹೋದರಿ ದೇಷ್ಣ. ಎ ಜವಾಹರ್ ನವೋದಯ ಮುಡಿಪು ಇಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.