ಸುಳ್ಯ ಬಿ.ಎಸ್.ಎನ್.ಎಲ್ ಇಂಜಿನಿಯರ್ ಗೋಪಾಲಕೃಷ್ಣ ಎನ್.ಆರ್ ರವರಿಗೆ ವರ್ಗಾವಣೆ- ಬೀಳ್ಕೋಡುಗೆ ಸಮಾರಂಭ

0

ಸುಳ್ಯ ಬಿ.ಎಸ್.ಎನ್.ಎಲ್. ಕಚೇರಿಯ ಸಬ್ ಡಿವಿಸನಲ್ ಇಂಜಿನಿಯರ್ ಗೋಪಾಲಕೃಷ್ಣ ಎನ್.ಆರ್ ರವರು ಕೇರಳದ ಕಣ್ಣೂರಿನ ತಳಿಪರಂಬ್ ಎಂಬಲ್ಲಿಗೆ ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ ಸುಳ್ಯ ಕಚೇರಿಯಲ್ಲಿ ಬೀಳ್ಕೋಡುಗೆ ಸಮಾರಂಭವು ಜೂ.24 ರಂದು ನಡೆಯಿತು.

2012 ರಲ್ಲಿ ಸುಳ್ಯಕ್ಕೆ ವರ್ಗಾಗಣೆಗೊಂಡು ಎಸ್.ಡಿ.ಇ ಹುದ್ದೆಯಲ್ಲಿ ಸೇವೆ ಸಲ್ಲಿಸಿರುತ್ತಾರೆ. ಸುಮಾರು 12 ವರ್ಷಗಳಿಂದ ಸುಳ್ಯ ಮತ್ತು ‌ಬೆಳ್ಳಾರೆ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸಿರುವ ಇವರು ಕೇರಳಕ್ಕೆ ವರ್ಗಾವಣೆ ಗೊಂಡಿರುತ್ತಾರೆ.
ಕಚೇರಿ ಸಿಬ್ಬಂದಿ ಕೇಳತ್ತಾಯರು ಪ್ರಾರ್ಥಿಸಿ, ಗೋಪಾಲಕೃಷ್ಣ ಭಟ್ ಸ್ವಾಗತಿಸಿದರು. ನಿವೃತ್ತ ಬಿ.ಎಸ್.ಎನ್.ಎಲ್ ಉದ್ಯೋಗಿ ಗಿರಿಯಪ್ಪ ನಾಯ್ಕ್ ಕಾರ್ಯಕ್ರಮ ನಿರೂಪಿಸಿದರು.


ಕಚೇರಿಯ ಸಿಬ್ಬಂದಿ ವರ್ಗದವರು ಶುಭ ಹಾರೈಸಿದರು.