ಗುತ್ತಿಗಾರು ಲಯನ್ಸ್‌ ಕ್ಲಬ್ ನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

0

ಸಾಧಕ ವಿದ್ಯಾರ್ಥಿಗಳಿಗೆ, ಇಂಜಿನಿಯರ್ ರವಿಪ್ರಕಾಶ್ ರಿಗೆ ಸನ್ಮಾನ, ಸಹಾಯ ಹಸ್ತ ಹಸ್ತಾಂತರ

ಲಯನ್ಸ್‌ ಕ್ಲಬ್ ಗುತ್ತಿಗಾರು ಇದರ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜು.3 ಲಯನ್ಸ್ ಸೇವಾ ಭವನ ಗುತ್ತಿಗಾರು ಇಲ್ಲಿ ನಡೆಯಿತು. ಪದಗ್ರಹಣವನ್ನು
ಜಿಲ್ಲೆ -317 D ಇದರ ಉಪ ರಾಜ್ಯಪಾಲ ಕುಡ್ಫಿ ಅರವಿಂದ ಶೆಣೈ ಪದಗ್ರಹಣ ನಡೆಸಿಕೊಟ್ಟರು.

ವೇದಿಕೆಯಲ್ಲಿ ಲಯನ್ಸ್ ಪ್ರಾಂತೀಯ ಅಧ್ಯಕ್ಷ ರೇಣುಕಾ ಜಾಕೆ, ವಲಯ ಅಧ್ಯಕ್ಷ ಲಿಜೋ ಜೋಸ್, ಗುತ್ತಿಗಾರು ಲಯನ್ಸ್ ಕ್ಲಬ್ ಅಧ್ಯಕ್ಷ ಮಣಿ ಮುಂಡೋಡಿ, ಕಾರ್ಯದರ್ಶಿ ಜಯರಾಮ ಕಡ್ಲಾರು, ಕೋಶಾಧಿಕಾರಿ ಉದಯಕುಮಾರ್ ದೇರಪಜ್ಜನ ಮನೆ, ನೂತನ ಅಧ್ಯಕ್ಷ ಜಯರಾಮ ಕಡ್ಲಾರು, ಎಂ.ಡಿ ವಿಜಯಕುಮಾರ್, ಕೋಶಾಧಿಕಾರಿ ಮೋಹನ್ ಕೆ ಉಪಸ್ಥಿತರಿದ್ದರು.

ಚಾರ್ಟರ್ ನೈಟ್ ಕಾರ್ಯಕ್ರಮವನ್ನು ನಿತ್ಯಾನಂದ ಮುಂಡೋಡಿ ಹಾಗೂ ಡಿ.ಎಸ್ ಧರ್ಮಪಾಲ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ಪದಗ್ರಹಣ ಕಾರ್ಯಕ್ರಮದಲ್ಲಿ ಬಡತನದ ಮನೆಯವರಿಗೆ ಅತಿ ಕಡಿಮೆಯಲ್ಲಿ, ಕೆಲವೊಮ್ಮೆ ಉಚಿತವಾಗಿ ಪ್ರೊಜೆಕ್ಟ್ ಮಾಡಿ ಕೊಡುತ್ತಿರುವ ಇಂಜಿನಿಯರ್ ರವಿಪ್ರಕಾಶ್ ಬಳ್ಳಡ್ಕ ಅವರನ್ನು ಗೌರವಿಸಲಾಯಿತು, ಎಸ್. ಎಸ್ .ಎಲ್. ಸಿ. ಯಲ್ಲಿ ಮತ್ತು ಪಿ.ಯು.ಸಿ.ಯಲ್ಲಿ ಸಾಧನೆಗೈದ ಸ್ಥಳೀಯ ಶಾಲಾ ಮಕ್ಕಳಿಗೆ ಗೌರವಿಸಿ ಸಹಾಯಧನ ನೀಡಲಾಯಿತು. ಪಂಜ ಪಿ ಯು ಕಾಲೇಜು ಉತ್ತಮ ಫಲಿತಾಂಶ ದಾಖಲಿಸಿದಕ್ಕಾಗಿ ಅಲ್ಲಿನ ಪ್ರಾಂಶುಪಾಲ ವೆಂಕಪ್ಪ ಕೇನಾಜೆ ಅವರನ್ನು ಗೌರವಿಸಲಾಯಿತು. ವಳಲಂಬೆ ಬಳಿಯ ವಿಕಲಚೇತನ ಮಗುವಿಗೆ ಸಹಾಯ ಧನ ನೀಡಲಾಯಿತು.


ನಿಕಟ ಪೂರ್ವ ಅಧ್ಯಕ್ಷ ಮಣಿ ಮುಂಡೋಡಿ ಸ್ವಾಗತಿಸಿ, ಎಂ.ಡಿ ವಿಜಯಕುಮಾರ್ ವಂದಿಸಿದರು. ವೆಂಕಪ್ಪ ಮಾಸ್ತರ್ ಕೇನಾಜೆ ಕಾರ್ಯಕ್ರಮ ನಿರೂಪಿಸಿದರು.