ಐವರ್ನಾಡು ರಬ್ಬರು ಬೆಳೆಗಾರರ ಸಂಘದ ವತಿಯಿಂದ

0

ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ದೇಣಿಗೆ

ಐವರ್ನಾಡು ರಬ್ಬರು ಬೆಳೆಗಾರರ ಸಂಘದ ವತಿಯಿಂದ ರೂ.5000 ನಗದು ದೇಣಿಗೆಯನ್ನು ಶ್ರೀ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ನೀಡಲಾಯಿತು.
ಸಂಘದ ಅಧ್ಯಕ್ಷ ರಾಜಾರಾಮ ರಾವ್ ಉದ್ದಂಪಾಡಿಯವರು ದೇವಸ್ಥಾನದ ಪೂಗವನ ಮತ್ತು ಕಲ್ಪವೃಕ್ಷ ಸೇವಾ ಸಮಿತಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ರಬ್ಬರ್ ಬೆಳೆಗಾರರ ಸಂಘದ ಉಪಾಧ್ಯಕ್ಷರಾದ ರಾಧಾಕೃಷ್ಣ ಮಿತ್ತಮೂಲೆ, ಕಾರ್ಯದರ್ಶಿ ಧನಂಜಯ ಮಡ್ತಿಲ, ಜೆ.ಟಿ.ವೆಂಕಪ್ಪ ಗೌಡ, ಪ್ರಸಾದ್ ಜಬಳೆ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶ್ರೀನಿವಾಸ ಮಡ್ತಿಲ, ಪೂಗವನ ಕಲ್ಪವೃಕ್ಷ ಸೇವಾ ಸಮಿತಿಯ ಅಧ್ಯಕ್ಷ ದಾಸಪ್ಪ ಗೌಡ ಕೋಡ್ತೀಲು, ಕಾರ್ಯದರ್ಶಿ ದೇವದಾಸ್ ಕತ್ಲಡ್ಕ ಹಾಗೂ ವ್ಯವಸ್ಥಾಪನಾ ಸಮಿತಿ ಸದಸ್ಯರು ಉಪಸ್ಥಿತರಿದ್ದರು.