ನೀರು ಪಾಲಾದ ಕೂಲಿ ಕಾರ್ಮಿಕ ನಾರಾಯಣ ಪತ್ತೆಗಾಗಿಮುಂದುವರಿದ ಶೋಧ ಕಾರ್ಯ

0

ಆಲೆಟ್ಟಿ ಪಂಚಾಯತ್ ವ್ಯಾಪ್ತಿಯಕೂರ್ನಡ್ಕ ಹೊಳೆಯಲ್ಲಿ ಕೊಚ್ಚಿ ಹೋದ ವ್ಯಕ್ತಿ ನಾರಾಯಣ ಯಾನೆ ಬಾಲಕೃಷ್ಣನ್ ಎಂದು ಗುರುತಿಸಲಾಗಿದೆ.

ಕೇರಳದ ಕಾಂಞಂಗಾಡ್ ಸಮೀಪದವರಾಗಿದ್ದು ಕೂರ್ನಡ್ಕದಲ್ಲಿರುವ ಜೋಸ್ ಎಂಬವರಿಗೆ ಸೇರಿದ ರಬ್ಬರ್ ತೋಟದಲ್ಲಿ ಟ್ಯಾಪಿಂಗ್ ಕೆಲಸಕ್ಕೆ ಬಂದಿದ್ದರೆಂದು ತಿಳಿದು ಬಂದಿದೆ.
ಸಂಜೆ ಕೆಲಸ ಮುಗಿಸಿ ಹಿಂತಿರುಗುವ ವೇಳೆಗೆ ಪಾಲ ದಾಟುತ್ತಿರುವ ಸಂದರ್ಭ ಆಯ ತಪ್ಪಿ ಬಿದ್ದು ನೀರಿನ ಸೆಳೆತಕ್ಕೆ ಕೊಚ್ಚಿಕೊಂಡು ಹೋಗಿರುತ್ತಾರೆ. ನೀರು ಪಾಲಾದ ಕಾರ್ಮಿಕನ‌ ಪತ್ತೆಗಾಗಿ ಶೋಧ ಕಾರ್ಯ ಮುಂದುವರಿದಿದೆ.