ಪೈಲಾರು ಅಂಗನವಾಡಿ ಕೇಂದ್ರಕ್ಕೆ ದಿವ್ಯ ಮಡಪ್ಪಾಡಿ ಯವರಿಂದ ಪ್ರವೇಶ ದ್ವಾರದ ಗೇಟ್ ಕೊಡುಗೆ

0

ಅಮರಮುಡ್ನೂರು ಗ್ರಾಮದಪೈಲಾರಿನಲ್ಲಿರುವ ಅಂಗನವಾಡಿ ಕೇಂದ್ರಕ್ಕೆ ಪ್ರವೇಶಿಸುವ ದ್ವಾರದಲ್ಲಿ ಹೊಸದಾಗಿ ಗೇಟನ್ನು ನಿರ್ಮಿಸಿ ಲೋಕಾರ್ಪಣೆ ಮಾಡಲಾಯಿತು.
ಸ್ಥಳೀಯ ಪ್ರಗತಿಪರ ಕೃಷಿಕರು ಹಿರಿಯರಾದ ಎಂ.ಟಿ.ಶಾಂತಿಮೂಲೆಯವರು ಗೇಟನ್ನು ತೆರೆದು ಉದ್ಘಾಟನೆಯನ್ನು ನೆರವೇರಿಸಿದರು.
ಅಮರಮುಡ್ನೂರು ಪಂಚಾಯತ್ ಸದಸ್ಯೆ ಶ್ರೀಮತಿ ದಿವ್ಯ ಮಡಪ್ಪಾಡಿ ಗೇಟನ್ನು ಕೊಡುಗೆಯಾಗಿ ನೀಡಿದರು. ಅಂಗನವಾಡಿ ಕಾರ್ಯಕರ್ತೆ ಚಂದ್ರಾವತಿ ಕೆರೆಮೂಲೆ, ಸಹಾಯಕಿ ಪದ್ಮಾವತಿ ಪೈಲಾರು, ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು, ಅದ್ಯಾಪಕ ವೃಂದದವರು, ಅಂಗನವಾಡಿ ಮಕ್ಕಳು, ಪೋಷಕರು, ಸ್ತ್ರೀ ಶಕ್ತಿ ಸಂಘದ ಸದಸ್ಯರು ಭಾಗವಹಿಸಿದರು.