ಕನಕಮಜಲು: ಪೆರುಂಬಾರು ಮದಿಮಾಳು ಮುಖ ಶ್ರೀ ದುರ್ಗಾದೇವಿ ಸಾನಿಧ್ಯದಲ್ಲಿ ಚಂಡಿಕಾಹೋಮ ಮತ್ತು ಅನುಜ್ಞಾ ಪ್ರಾರ್ಥನೆ

0

ಕನಕಮಜಲು ಗ್ರಾಮದ ಪೆರುಂಬಾರು ಮದಿಮಾಳು ಮುಖ ಎಂಬಲ್ಲಿ ಸುಮಾರು 400 ವರ್ಷಗಳ ಹಳೆಯದಾದ ಅಜೀರ್ಣ ವ್ಯವಸ್ಥೆಯಲ್ಲಿರುವ ಶ್ರೀ ದುರ್ಗಾದೇವಿ ಸಾನಿಧ್ಯದ ಜೀರ್ಣೋದ್ಧಾರದ ಪ್ರಯುಕ್ತ ಚಂಡಿಕಾಹೋಮ ಮತ್ತು ಅನುಜ್ಞಾ ಪ್ರಾರ್ಥನೆಯು ಜೂ.30ರಂದು ನಡೆಯಿತು.

ಬ್ರಹ್ಮಶ್ರೀ ವೇ. ಮೂ. ಕೆಮ್ಮಿಂಜೆ ಸುಬ್ರಹ್ಮಣ್ಯ ಬಳ್ಳುಕರಾಯ ತಂತ್ರಿಗಳ ನೇತೃತ್ವದಲ್ಲಿ ಚಂಡಿಕಾಹೋಮ ಮತ್ತು ಅನುಜ್ಞಾ ಪ್ರಾರ್ಥನೆಯು ನಡೆಯಿತು.

ವಾಸ್ತುಶಿಲ್ಪಿ ರಾಧಾಕೃಷ್ಣ ಆಚಾರ್ಯ ವಿನೋಬನಗರ ಅವರ ನೇತೃತ್ವದಲ್ಲಿ ಪ್ರಾರ್ಥನೆ ನೆರವೇರಿತು.
ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿಯ ಸಂಚಾಲಕ ವಾಸುದೇವ ಪೆರುಂಬಾರು, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಗೋಪಣ್ಣ ಗೌಡ ಪೆರುಂಬಾರು, ಸಹ ಸಂಚಾಲಕ ಜೀವನ್ ಕುಮಾರ್ ಪೆರುಂಬಾರು ಸೇರಿದಂತೆ ಜೀರ್ಣೋದ್ಧಾರ ಸಮಿತಿಯ ಪದಾಧಿಕಾರಿಗಳು ಸೇರಿದಂತೆ ಭಕ್ತಾದಿಗಳು ಉಪಸ್ಥಿತರಿದ್ದರು.