ಕಲ್ಲಪಳ್ಳಿ -ಪಾಣತ್ತೂರು ರಸ್ತೆಯ ಮಣ್ಣು ತೆರವು ಕಾರ್ಯಾಚರಣೆ-ಲಘು ವಾಹನಗಳಿಗೆ ಸಂಚಾರಕ್ಕೆ ಅವಕಾಶ

0

ಅಂತರ್ ರಾಜ್ಯ ಸಂಪರ್ಕದ ಕಲ್ಲಪಳ್ಳಿ ಪಾಣತ್ತೂರು ರಸ್ತೆ ಮೇಲೆ ಗುಡ್ಡ ಜರಿದು ಸಂಪರ್ಕ ಕಡಿತಗೊಂಡಿತು.


ಪಾದಚಾರಿಗಳಿಗೆ ನಡೆದಾಡಲು ಹಾಗೂ
ವಾಹನ ಸಂಚಾರಕ್ಕೆ ಅಡಚಣೆಯುಂಟಾಗಿದ್ದು ಸ್ಥಳೀಯ ಪನತ್ತಡಿ ಗ್ರಾಮ ಪಂಚಾಯತ್ ಸದಸ್ಯರ ನೇತೃತ್ವದಲ್ಲಿ ಮಣ್ಣು ತೆರವು ಕಾರ್ಯ ಭರದಿಂದ ನಡೆಯುತ್ತಿದೆ. ಜೆ.ಸಿ.ಬಿ ಬಳಸಿ ರಸ್ತೆಯ ಮೇಲಿನ ಮಣ್ಣು ತೆರವುಗೊಳಿಸಿ ಲಘು ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.