ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿ. ಭೇಟಿ ಮಾಡಿದ ಡಾ.ರಘು, ಎಂ.ವಿ.ಜಿ., ನಂದಕುಮಾರ್ ನಿಯೋಗ

0

ಸುಳ್ಯ ಕಾಂಗ್ರೆಸ್ ನ ವಿದ್ಯಮಾನಗಳ ಮಾಹಿತಿ ಸಲ್ಲಿಕೆ

ಸುಳ್ಯ ಕಾಂಗ್ರೆಸ್ ನಲ್ಲಿ ಇತ್ತೀಚೆಗೆ ನಡೆಯುತ್ತಿರುವ ವಿದ್ಯಮಾನಗಳ ಕುರಿತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ರನ್ನು ಭೇಟಿಯಾಗಿ ಕಾಂಗ್ರೆಸ್ ಮುಖಂಡರಾದ ಡಾ.ಬಿ.ರಘು,ಎಂ.ವೆಂಕಪ್ಪ ಗೌಡ ಹಾಗು ನಂದಕುಮಾರ್ ಮಡಿಕೇರಿಯವರ ನಿಯೋಗ ಭೇಟಿ ಮಾಡಿ ಮಾಹಿತಿ ನೀಡಿರುವುದಾಗಿ ತಿಳಿದುಬಂದಿದೆ.

ಈ ಕುರಿತು ಮಾಹಿತಿ ನೀಡಿರುವ ಎಂ.ವೆಂಕಪ್ಪ ಗೌಡರು ನಾವು ಕೆಪಿಸಿಸಿ ಅಧ್ಯಕ್ಷ ಹಾಗು ರಾಜ್ಯದ ಉಪ ಮುಖ್ಯ ಮಂತ್ರಿ ಡಿ.ಕೆ ಶಿವಕುಮಾರ್ ರವರನ್ನ ಭೇಟಿ ಮಾಡಿ ಪಕ್ಷದಲ್ಲಿ ಇತ್ತೀಚೆಗಿನ ದಿನಗಳಲ್ಲಿ ನಡೆಯುತ್ತಿರುವ ವಿದ್ಯಾಮಾನವನ್ನು ಸಂಪೂರ್ಣವಾಗಿ ತಿಳಿಸಿದ್ದೇವೆ. ಈ ಬಗ್ಗೆ ತೀಕ್ಷ್ಣ ವಾಗಿ ಪ್ರತಿಕ್ರಿಯಿಸಿದ ಕೆಪಿಸಿಸಿ ಅಧ್ಯಕ್ಷರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಈಗಾಗಲೆ ಅಮಾನತುಗೊಳಿಸಿದ ಎಲ್ಲಾ ಕಾರ್ಯಕರ್ತರ ಅಮಾನತು ರದ್ದು ಗೊಳಿಸುವಂತೆ ಸೂಚಿಸಿ ಶಿಸ್ತು ಸಮಿತಿ ಅಧ್ಯಕ್ಷರಿಗೆ ನಿರ್ದೇಶನ ನೀಡಿದ್ದಾರೆ. ನಾನು, ಡಾ ರಘು ,ಹಾಗು ನಂದಕುಮಾರ್ ಮಡಿಕೇರಿ ಜತೆಯಾಗಿ ಹೋಗಿದ್ದೆವು ಎಂದು‌ ಅವರು ತಿಳಿಸಿದ್ದಾರೆ.